ಭಾರತೀಯ ವೈದ್ಯ ಪದ್ಧತಿಯಾದ ಆಯುರ್ವೇದದಲ್ಲಿ ನಮ್ಮ ಸುತ್ತಲಿನ ಪ್ರದೇಶದಲ್ಲಿ ಲಭ್ಯವಿರುವ ಔಷಧಿ ಸಸ್ಯಗಳನ್ನು ಉಪಯೋಗಿಸಿ ಪ್ರಥಮ ಹಂತದಲ್ಲಿ ಸಾಮಾನ್ಯ ರೋಗಗಳಿಗೆ ಚಿಕಿತ್ಸೆ ಮಾಡಿಕೊಳ್ಳಲು ವಿಧಾನಗಳನ್ನು ಹೇಳಲಾಗಿದೆ. ಮನೆಯಲ್ಲೇ ಔಷಧಿ ಸಸ್ಯಗಳನ್ನು ವಿವಿಧ ರೀತಿಯಲ್ಲಿ ಉಪಯೋಗಿಸಿ ರೋಗನಿವಾರಣೆ ಮಾಡಿಕೊಳ್ಳಬಹುದಾಗಿದೆ. ಈ ಚಿಕಿತ್ಸಾ ವಿಧಾನಗಳನ್ನು ಮನೆಮದ್ದು ಎಂದು ಕರೆಯಬಹುದು. ನಮಗೆ ಸುಲಭವಾಗಿ ಲಭ್ಯವಿರುವ ಔಷಧೀಯ ಗುಣಗಳುಳ್ಳ ಸಸ್ಯಗಳೆಂದರೆ – ಅಮೃತಬಳ್ಳಿ, ತುಳಸಿ, ಒಂದೆಲಗ, ಲೋಳೆಸರ, ಕರಿಬೇವು, ದೊಡ್ಡಪತ್ರೆ, ಬಸಳೆ ಸೊಪ್ಪು, ಹೊನಗೊನೆ ಸೊಪ್ಪು ಮುಂತಾದವುಗಳು. ಕೆಲವು ಔಷಧಿ ಸಸ್ಯಗಳನ್ನು ಮನೆಮದ್ದಾಗಿ ಬಳಸಬಹುದಾದ ಸುಲಭ ವಿಧಾನಗಳು ಕೆಳಕಂಡಂತಿವೆ:
1. ಅಮೃತಬಳ್ಳಿ
ಹೆಸರೇ ಹೇಳುವ ಹಾಗೆ ಈ ಔಷಧಿ ಸಸ್ಯ ಅಮೃತಕ್ಕೆ ಸಮನಾದ ಗುಣಗಳನ್ನು ಹೊಂದಿದೆ. ಇದನ್ನು ರೋಗಿಗಳಲ್ಲದೆ ಆರೋಗ್ಯವಂತರೂ ಕೂಡ ಬಳಸಬಹುದು.
ಚಹರೆ: ಇದೊಂದು ಬಳ್ಳಿ, ಕಾಂಡ ಕತ್ತರಿಸಿದರೆ ಚಕ್ರಾಕಾರವಿರುತ್ತದೆ, ಹೃದಯಾಕಾರದ ಎಲೆಗಳು, ಬಳ್ಳಿಯಿಂದ ಅಲ್ಲಲ್ಲಿ ದಾರ ಜೋತಾಡುತ್ತಿರುತ್ತದೆ.
ಉಪಯೋಗ
2. ತುಳಸಿ
ಚಹರೆ: ಇದೊಂದು ಚಿರಪರಿಚಿತ ಸಸ್ಯ.
ಉಪಯೋಗ
3. ಒಂದೆಲಗ
ಚಹರೆ: ಇದೊಂದು ನೆಲದ ಮೆಲೆ ಹರಡುವ ಬಳ್ಳಿಯಾಗಿದೆ, ಎಲೆಗಳು ಮೆದುಳಿನ ಆಕಾರದಲ್ಲಿರುತ್ತವೆ; ಹೆಚ್ಚು ನೀರಿರುವ ಜಾಗದಲ್ಲಿ ಬೆಳೆಯುತ್ತದೆ.
ಉಪಯೋಗ
4. ಲೋಳೆಸರ
ಚಹರೆ: ಇದೊಂದು ಸಣ್ಣ ಗಿಡ, ದಪ್ಪನೆಯ ಎಲೆಗಳು, ಎಲೆಗಳ ಅಂಚಿನುದ್ದಕ್ಕೂ ಮುಳ್ಳುಗಳಿರುತ್ತವೆ ಹಾಗೂ ಎಲೆ ಒಳಗಿನ ತಿರುಳು ಲೋಳೆಯಾಗಿರುತ್ತದೆ.
ಉಪಯೋಗ
5. ಕರಿಬೇವು
ಚಹರೆ: ಇದೊಂದು ಚಿರಪರಿಚಿತ ಸಸ್ಯ.
ಉಪಯೋಗ
ಈ ಔಷಧಿ ಸಸ್ಯಗಳನ್ನು ನಾವು ನಮ್ಮ ಮನೆಯಲ್ಲಿಯೇ ಹೂವಿನ ಕುಂಡಗಳಲ್ಲಿಯೂ ಸಹ ಸುಲಭವಾಗಿ ಬೆಳೆಸಿಕೊಳ್ಳಬಹುದು. ಇದರಿಂದ ಆರೋಗ್ಯ ವೃದ್ಧಿಸುವುದು ಮಾತ್ರವಲ್ಲ, ಪರಿಸರವೂ ಸಮೃದ್ಧಿಯಾಗುವುದರಲ್ಲಿ ಸಂಶಯವಿಲ್ಲ.
1. ಅಮೃತಬಳ್ಳಿ
ಹೆಸರೇ ಹೇಳುವ ಹಾಗೆ ಈ ಔಷಧಿ ಸಸ್ಯ ಅಮೃತಕ್ಕೆ ಸಮನಾದ ಗುಣಗಳನ್ನು ಹೊಂದಿದೆ. ಇದನ್ನು ರೋಗಿಗಳಲ್ಲದೆ ಆರೋಗ್ಯವಂತರೂ ಕೂಡ ಬಳಸಬಹುದು.
ಚಹರೆ: ಇದೊಂದು ಬಳ್ಳಿ, ಕಾಂಡ ಕತ್ತರಿಸಿದರೆ ಚಕ್ರಾಕಾರವಿರುತ್ತದೆ, ಹೃದಯಾಕಾರದ ಎಲೆಗಳು, ಬಳ್ಳಿಯಿಂದ ಅಲ್ಲಲ್ಲಿ ದಾರ ಜೋತಾಡುತ್ತಿರುತ್ತದೆ.
ಅಮೃತಬಳ್ಳಿ |
- ಜ್ವರ: ಎಲ್ಲಾ ರೀತಿಯ ಜ್ವರಗಳಲ್ಲಿ ಈ ಔಷಧ ಪರಿಣಾಮಕಾರಿಯಾಗಿದೆ. 4 ಚಮಚ ಕಾಂಡದ ರಸವನ್ನು 1 ಚಮಚ ಜೇನುತುಪ್ಪದ ಜೊತೆ ದಿನದಲ್ಲಿ 3 ಬಾರಿ ಊಟದ ನಂತರ ಸೇವಿಸಬೇಕು. ಮಕ್ಕಳಿಗೆ ಅರ್ಧ ಪ್ರಮಾಣ ಬಳಸಬೇಕು. ಅಲ್ಲದೇ, ಒಣಗಿದ ಕಾಂಡದ ಕಷಾಯ ತಯಾರಿಸಿ ಕೂಡ ಸೇವಿಸಬಹುದು. 1 ಭಾಗ ಕಾಂಡವನ್ನು 4 ಭಾಗ ನೀರಿನಲ್ಲಿ ಸಣ್ಣ ಉರಿಯ ಮೇಲೆ 1/4 ಭಾಗಕ್ಕೆ ಇಳಿಸಿ, ಶೋಧಿಸಿ, 30 ಮಿ. ಲೀ. ಜೇನಿನ ಜೊತೆ 3 ಬಾರಿ ಸೇವಿಸಬೇಕು.
- ಚರ್ಮರೋಗ: ಎಲೆಗಳನ್ನು ಸ್ವಚ್ಛಮಾಡಿ, ಅರಿಶಿನದ ಜೊತೆ ಅರೆದು ಲೇಪಮಾಡಬೇಕು. ಅರ್ಧ ಗಂಟೆಯ ನಂತರ ಬೆಚ್ಚಗಿನ ನೀರಿನಿಂದ ತೊಳೆಯಬೇಕು.
- ಸಕ್ಕರೆ ಕಾಯಿಲೆ: 1 ಇಂಚು ಬಲಿತ ಕಾಂಡವನ್ನು ಜಗಿದು ರಸವನ್ನು ದಿನಕ್ಕೆ ಒಂದು ಬಾರಿ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ಬರುತ್ತದೆ.
2. ತುಳಸಿ
ಚಹರೆ: ಇದೊಂದು ಚಿರಪರಿಚಿತ ಸಸ್ಯ.
ತುಳಸಿ |
- ಕೆಮ್ಮು, ನೆಗಡಿ: 10 ಎಲೆಗಳನ್ನು ಜೇನುತುಪ್ಪದ ಜೊತೆ ದಿನದಲ್ಲಿ 3 ಬಾರಿ ಊಟದ ನಂತರ ಸೇವಿಸಬೇಕು
- ಚರ್ಮರೋಗ: ಎಲೆಗಳನ್ನು ಅರಿಶಿನದ ಜೊತೆಗೆ ಅರೆದು ಲೇಪಿಸಬೇಕು; 1/2 ಗಂಟೆಯ ನಂತರ ಬೆಚ್ಚಗಿನ ನೀರಿನಲ್ಲಿ ತೊಳೆಯಬೇಕು.
- ಜಂತುಹುಳು: ತುಳಸಿ ಬೀಜ (1/2 ಚಮಚ) ವನ್ನು ಬೆಲ್ಲದೊಂದಿಗೆ ಊಟದ ನಂತರ ದಿನದಲ್ಲಿ 2 ಬಾರಿ ಸೇವಿಸಬೇಕು.
- ನೀರು ಶುದ್ಧೀಕರಣ: 8 ರಿಂದ 10 ಎಲೆಗಳನ್ನು ಕುಡಿಯುವ ನೀರಿನಲ್ಲಿ ಹಾಕಿದರೆ, ನೀರಿನಿಲ್ಲಿರುವ ಕ್ರಿಮಿಗಳು ನಾಶವಾಗುತ್ತವೆ.
- ಸೊಳ್ಳೆಗಳ ನಿಯಂತ್ರಣ: ಮನೆಯ ಸುತ್ತ ಹೆಚ್ಚಾಗಿ ತುಳಸಿ ಗಿಡಗಳನ್ನು ಬೆಳೆಸುವುದರಿಂದ ಸೊಳ್ಳೆಗಳನ್ನು ನಿಯಂತ್ರಿಸಬಹುದು ಮತ್ತು ಶುದ್ಧ ಗಾಳಿ ಪಡೆಯಬಹುದು. ಒಣಗಿದ ಎಲೆಗಳನ್ನು (ಒಂದು ಹಿಡಿ) ಕೆಂಡದಲ್ಲಿ ಧೂಪ ಹಾಕಿದರೆ ಸೊಳ್ಳೆಗಳು ಇಲ್ಲವಾಗುತ್ತವೆ.
3. ಒಂದೆಲಗ
ಚಹರೆ: ಇದೊಂದು ನೆಲದ ಮೆಲೆ ಹರಡುವ ಬಳ್ಳಿಯಾಗಿದೆ, ಎಲೆಗಳು ಮೆದುಳಿನ ಆಕಾರದಲ್ಲಿರುತ್ತವೆ; ಹೆಚ್ಚು ನೀರಿರುವ ಜಾಗದಲ್ಲಿ ಬೆಳೆಯುತ್ತದೆ.
ಒಂದೆಲಗ |
- ಜ್ಞಾಪಕಶಕ್ತಿ ವರ್ಧನೆ: ಪ್ರತಿನಿತ್ಯ ಬೆಳಿಗ್ಗೆ 4 ರಿಂದ 6 ಎಲೆಗಳನ್ನು ಜಗಿದು ನುಂಗಬೇಕು.
- ರಕ್ತದೊತ್ತಡ: ಒಂದೆಲಗದ ಎಣ್ಣೆ ತಯಾರಿಸಿ ನೆತ್ತಿಗೆ ಹಚ್ಚಿಕೊಳ್ಳಬೇಕು.
- ನಿದ್ರಾಹೀನತೆ: ಎಣ್ಣೆಯನ್ನು ಬೆಚ್ಚಗೆ ಮಾಡಿ ಮಲಗುವ ಮುನ್ನ ನೆತ್ತಿಗೆ ಹಾಗೂ ಪಾದಗಳಿಗೆ ಹಚ್ಚಿ ಮೃದುವಾಗಿ ಅಭ್ಯಂಗ ಮಾಡಿಕೊಳ್ಳಬೇಕು.
- ತೊದಲು: ಒಂದೆಲಗ ಎಲೆಯ ರಸವನ್ನು (3 ಟೀ ಚಮಚ) 3 ಬಾರಿ ಊಟದ ನಂತರ ಜೇನಿನ ಜೊತೆ ಸೇವಿಸಬೇಕು.
4. ಲೋಳೆಸರ
ಚಹರೆ: ಇದೊಂದು ಸಣ್ಣ ಗಿಡ, ದಪ್ಪನೆಯ ಎಲೆಗಳು, ಎಲೆಗಳ ಅಂಚಿನುದ್ದಕ್ಕೂ ಮುಳ್ಳುಗಳಿರುತ್ತವೆ ಹಾಗೂ ಎಲೆ ಒಳಗಿನ ತಿರುಳು ಲೋಳೆಯಾಗಿರುತ್ತದೆ.
ಲೋಳೆಸರ |
- ಕೂದಲ ಆರೈಕೆ: ಲೋಳೆಸರದ ರಸವನ್ನು ಕೂದಲಿನ ಬುಡ ಹಾಗೂ ಕೂದಲಿಗೆ ಹಚ್ಚಿಕೊಂಡು 10 ನಿಮಿಷದ ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ತಲೆ ಸ್ನಾನ ಮಾಡಬೇಕು. ಇದರಿಂದ ಹೊಟ್ಟು ನಿವಾರಣೆಯಾಗಿ, ಕೂದಲು ಉದುರುವುದು ನಿಂತು, ಬೆಳವಣಿಗೆ ಹೆಚ್ಚಿ ಕೂದಲಿಗೆ ಹೊಳಪು ನೀಡುತ್ತದೆ.
- ಮುಖದ ಕಾಂತಿ: ಲೋಳೆಸರದ ರಸವನ್ನು ಮುಖಕ್ಕೆ ವಾರಕ್ಕೊಂದು ಬಾರಿ ಹಚ್ಚಿ 1/2 ಗಂಟೆಯ ನಂತರ ಬೆಚ್ಚಗಿನ ನೀರಿನಲ್ಲಿ ತೊಳೆಯುವುದರಿಂದ ತ್ವಚೆಯ ಕಾಂತಿ ಹೆಚ್ಚುತ್ತದೆ.
- ಚರ್ಮರೋಗ: ಒಣ ಚರ್ಮ ಇದ್ದವರು ಲೋಳೆಸರದ ರಸವನ್ನು ಅರಿಶಿನದ ಜೊತೆ ಸೇರಿಸಿ ದಿನಕ್ಕೆರಡು ಬಾರಿ ಹಚ್ಚಬೇಕು; 1/2 ಗಂಟೆಯ ನಂತರ ಬೆಚ್ಚಗಿನ ನೀರಿನಲ್ಲಿ ತೊಳೆಯಬೇಕು.
- ಸುಟ್ಟ ಗಾಯ: ಸುಟ್ಟಗಾಯಕ್ಕೆ ತಕ್ಷಣ ಲೋಳೆಸರವನ್ನು ಹಚ್ಚುವುದರಿಂದ ಉರಿ ಬೇಗ ಕಡಿಮೆಯಾಗುತ್ತದೆ.
- ಕೈಕಾಲು ಉರಿ: ಮಧುಮೇಹ ರೋಗಿಗಳಲ್ಲಿ ಲೋಳೆಸರದ ರಸವನ್ನು ಪಾದಗಳಿಗೆ ಹಾಗೂ ಅಂಗೈಗೆ ಹಚ್ಚಿಕೊಂಡಲ್ಲಿ ಉರಿ ನಿವಾರಣೆಯಾಗುತ್ತದೆ. ಶೀತ ಉಂಟಾಗುವ ಸಂಭವವಿರುವುದರಿಂದ, ಇದನ್ನು ರಾತ್ರಿಯ ಬದಲು ಮಧ್ಯಾಹ್ನದ ವೇಳೆ ಹಚ್ಚುವುದು ಸೂಕ್ತ.
5. ಕರಿಬೇವು
ಚಹರೆ: ಇದೊಂದು ಚಿರಪರಿಚಿತ ಸಸ್ಯ.
ಕರಿಬೇವು |
- ದೇಹದ ತೂಕ ಕುಗ್ಗಿಸಲು: 10 ರಿಂದ 15 ಎಲೆಗಳನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಜಗಿದು ತಿನ್ನಬೇಕು; ಮೂರು ತಿಂಗಳು ಸೇವಿಸುವುದರಿಂದ ದೇಹದ ಕೊಬ್ಬು ಕರಗಿ, ತೂಕ ಕಡಿಮೆಯಾಗುತ್ತದೆ.
- ರಕ್ತಹೀನತೆ: ಅರ್ಧ ಚಮಚ ಕರಿಬೇವಿನ ಸೊಪ್ಪಿನ ಪುಡಿಯನ್ನು ಸಮಪ್ರಮಾಣ ಜೇನಿನ ಜೊತೆ ಸೇವಿಸಬೇಕು. ಕರಿಬೇವಿನಲ್ಲಿರುವ ಕಬ್ಬಿಣಾಂಶ ರಕ್ತಹೀನತೆ ನಿವಾರಿಸುತ್ತದೆ.
- ಹುಳಿತೇಗು: ಅರ್ಧ ಚಮಚ ಕರಿಬೇವಿನ ಸೊಪ್ಪನ್ನು ಒಂದು ಲೋಟ ಮಜ್ಜಿಗೆಯ ಜೊತೆ ಊಟಕ್ಕೆ ಅರ್ಧ ಗಂಟೆ ಮುಂಚೆ ದಿನದಲ್ಲಿ 3 ಬಾರಿ, 7 ದಿನ ಸೇವಿಸಬೇಕು.
- ಕೇಶಚ್ಯುತಿ: ಒಂದು ಹಿಡಿ ಕರಿಬೇವಿನ ಸೊಪ್ಪನ್ನು ಸ್ವಲ್ಪ ನೀರಿನ ಜೊತೆ ಅರೆದುಕೊಳ್ಳಬೇಕು. 250 ಗ್ರಾಂ. ಕೊಬ್ಬರಿ / ಎಳ್ಳೆಣ್ಣೆ ಕಾಯಿಸಿ, ಅರೆದ ಸೊಪ್ಪನ್ನು ಸೇರಿಸಿ ಸಣ್ಣ ಉರಿಯಲ್ಲಿ ನೀರಿನ ಅಂಶ ಹೋಗುವವರೆಗೆ ಕಾಯಿಸಿ, ತಣ್ಣಗಾದ ನಂತರ ಶೋಧಿಸಿ ಶೇಖರಿಸಬೇಕು. ಇದನ್ನು ಕೂದಲಿಗೆ ಹಚ್ಚುವುದರಿಂದ ಕೂದಲು ಉದುರುವುದು ನಿಂತು, ಹೊಟ್ಟು ನಿವಾರಣೆಯಾಗಿ, ಕೇಶ ಕಪ್ಪಾಗಿ, ಉದ್ದವಾಗಿ ಬೆಳೆಯುತ್ತದೆ.
ಈ ಔಷಧಿ ಸಸ್ಯಗಳನ್ನು ನಾವು ನಮ್ಮ ಮನೆಯಲ್ಲಿಯೇ ಹೂವಿನ ಕುಂಡಗಳಲ್ಲಿಯೂ ಸಹ ಸುಲಭವಾಗಿ ಬೆಳೆಸಿಕೊಳ್ಳಬಹುದು. ಇದರಿಂದ ಆರೋಗ್ಯ ವೃದ್ಧಿಸುವುದು ಮಾತ್ರವಲ್ಲ, ಪರಿಸರವೂ ಸಮೃದ್ಧಿಯಾಗುವುದರಲ್ಲಿ ಸಂಶಯವಿಲ್ಲ.
ಲೇಖಕರ ಕಿರುಪರಿಚಯ | |
ಡಾ. ಚಂದ್ರಕಲ ಸಿ. ವೃತ್ತಿಯಲ್ಲಿ ವೈದ್ಯರಾಗಿರುವ ಇವರು ಮೂಲತಃ ಬೆಂಗಳೂರಿನವರು. ಪ್ರಸ್ತುತ ಕರ್ನಾಟಕ ಸರ್ಕಾರದ ಆಯುಷ್ ಇಲಾಖೆಯಲ್ಲಿ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. Blog | Facebook | Twitter |
ಲೇಖಕರು ಈ ಕಾಮೆಂಟ್ ಅನ್ನು ತೆಗೆದು ಹಾಕಿದ್ದಾರೆ.
ಪ್ರತ್ಯುತ್ತರಅಳಿಸಿVery good Post, user full thanks
ಪ್ರತ್ಯುತ್ತರಅಳಿಸಿHotel Booking Offer