ಭಾನುವಾರ, ನವೆಂಬರ್ 23, 2014

ನೆನಪು


ಓ ನನ್ನ ಗೆಳೆಯ
ನೀನಿಲ್ಲದ ಈ ಜೀವನ
ನೀರಿಲ್ಲದ ಮೀನಿನಂತೆ
ಕಂಪನ್ನ ಸೂಸದ ಹೂವಿನಂತೆ
ಈಗ ಬರೀ ಶೂನ್ಯ..

ಏನೆಂದು ವರ್ಣಿಸಲಿ ನಮ್ಮ
ಒಡನಾಟದ ಸಿಹಿ ನೆನಪುಗಳನ್ನು
ಅಂತರಾಳದ ಕೊಳಕ್ಕೆ ಕಲ್ಲನ್ನು ಹಾಕಿ
ನೆನಪೆಂಬ ಅಲೆಗಳನ್ನು ಎಬ್ಬಿಸಿ ನಗುವೆ ಏಕೆ?

ಹೇಗೆ ಬಣ್ಣಿಸಲಿ ನನ್ನ ಅಂತರಾಳದ ಭಾವನೆಯನ್ನ..
ಯಾರಲ್ಲಿ ಹೇಳಲಿ ನನ್ನ ನೋವನ್ನ?
ವಿಧಿಯ ಆಟ ನನ್ನಿಂದ ನಿನ್ನನ್ನು
ದೂರ.. ಬಹುದೂರ ಕರೆದೊಯ್ಯಿತು
ಈಗ ನೀನು ಕೇವಲ ನೆನಪು....

ಲೇಖಕರ ಕಿರುಪರಿಚಯ
ಶ್ರೀಮತಿ ವಸುಧಾ ಪೈ

ಉಡುಪಿ ಜಿಲ್ಲೆಯ ಗಂಗೊಳ್ಳಿಯಲ್ಲಿ ಹುಟ್ಟಿ ಬೆಳೆದ ಇವರು ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಕವನ ಮತ್ತು ಪತ್ತೇದಾರಿ ಕಾದಂಬರಿಗಳನ್ನು ಓದುವುದು ಇವರ ನೆಚ್ಚಿನ ಹವ್ಯಾಸ.

Blog  |  Facebook  |  Twitter

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ