ಗುರುವಾರ, ನವೆಂಬರ್ 29, 2018

ಬುದ್ಧಿವಂತ ಕುಂಟು ಮೇಕೆ

ಒಂದು ಊರು. ಆ ಊರಿನ ಹೆಸರು ರಾಮಪುರ. ಆ ಊರಿನಲ್ಲಿ ಮೇಕೆಗಳನ್ನು ಮತ್ತು ಕುರಿಗಳನ್ನು ಸಾಕುತ್ತಿದ್ದರು. ಅದೇ ಊರಿನಲ್ಲಿ ಹತ್ತು-ಹನ್ನೆರಡು ವರ್ಷದ ಹುಡುಗ ಇದ್ದನು. ಆ ಹುಡುಗನ ಹೆಸರು ರಹೀಮ ಎಂದು. ಆ ಹುಡುಗ ಅವರ ಮನೆಯಲ್ಲಿರುವ 12 ಮೇಕೆಗಳನ್ನು 5 ಕುರಿಗಳನ್ನು ಕಾಡಿಗೆ ಕರೆದುಕೊಂಡು ಹೋಗಿ ಹುಲ್ಲನ್ನು ಮೇಯಲು ಬಿಡುತ್ತಿದ್ದನು. ಆ ಮೇಕೆಗಳ ಹಿಂಡಿನಲ್ಲಿ ಒಂದು ಕುಂಟು ಮೇಕೆ ಇತ್ತು. ಆ ಮೇಕೆಗೆ ಮಾತು ಬರುತ್ತಿತ್ತು. ಸಂಜೆ ಆಯಿತು, ರಹೀಮ ಮೇಕೆ ಕುರಿಗಳನ್ನು ಮನೆಗೆ ಕರೆದುಕೊಂಡು ಬಂದನು. ಊಟ ಮಾಡಿ, ಮೇಕೆ ಕುರಿಗಳನ್ನು ಲೆಕ್ಕ ಮಾಡಿದ. ಸರಿಯಾಗಿದ್ದವು. ಕುಂಟು ಮೇಕೆಯನ್ನು ಮಾತನಾಡಿಸಿ ಹೋಗಿ ಮಲಗಿಕೊಂಡ.

ಮರುದಿನ ಬೆಳಿಗ್ಗೆ ನಿತ್ಯಕ್ರಮಗಳನ್ನು ಮುಗಿಸಿ, ಊಟ ಮಾಡಿ, ರಹೀಮ ಮೇಕೆ ಕುರಿಗಳನ್ನು ಕಾಡಿಗೆ ಕರೆದುಕೊಂಡು ಹೋಗುತ್ತಾನೆ. ಮಧ್ಯಾಹ್ನದ ಸಮಯದಲ್ಲಿ ತುಂತುರು ಮಳೆ ಬರುತ್ತಿತ್ತು. ಇದ್ದಕ್ಕಿದ್ದ ಹಾಗೆ ಜೋರಾಗಿ ಮಳೆ ಬಂತು. ಆಗ ಎಲ್ಲಾ ಮೇಕೆ ಕುರಿಗಳನ್ನು ಕರೆದುಕೊಂಡು ಮನೆಗೆ ಓಡಿಬಂದ ರಹೀಮ. ಎಂದಿನಂತೆ ಊಟ ಮಾಡಿ ಕುಂಟು ಮೇಕೆಯನ್ನು ಮಾತನಾಡಿಸಲು ಬಂದ. ಆದರೆ, ಕುಂಟು ಮೇಕೆ ಇರಲಿಲ್ಲ. ಅದಕ್ಕೆ ರಹೀಮ ನಿಧಾನವಾಗಿ ಬರುತ್ತಿರುತ್ತದೆ, ಯೋಚನೆ ಬೇಡ ಅಂತ ಸುಮ್ಮನಾದ.

ಆದರೆ ಆ ಕುಂಟು ಮೇಕೆ ಓಡಲು ಆಗದೆ ಕಾಡಿನಲ್ಲಿ ಇರುತ್ತದೆ. ಕಾಡಿನಲ್ಲಿ ಇದ್ದ ಗುಹೆಯ ಒಳಗಡೆ ಕುಂಟು ಮೇಕೆ ಹೋಗಿದ್ದನ್ನು ಒಂದು ಹುಲಿ ನೋಡುತ್ತದೆ. ಆ ಗುಹೆಯ ಒಳಗಡೆ ಕಾಟುದೇವರ ವಿಗ್ರಹ ಇರುತ್ತದೆ. ಹುಲಿ ಮೇಕೆಯನ್ನು ತಿನ್ನಲು ಮುಂದಾಗುತ್ತದೆ. ಇದನ್ನು ನೋಡಿದ ಮೇಕೆಗೆ ಒಂದು ಉಪಾಯ ಹೊಳೆಯುತ್ತದೆ.

"ನೋಡು ಹುಲಿ, ಕಾಟುದೇವರು ಪ್ರತ್ಯಕ್ಷವಾಗಿ 10 ಜಿಂಕೆ, 10 ಸಿಂಹ, 10 ಹುಲಿಗಳನ್ನು ತಿಂದರೆ ಶಕ್ತಿ ಬರುತ್ತದೆ ಎಂದು ಹೇಳಿದರು. ನಾನು ಈಗ 10 ಜಿಂಕೆ, 10 ಸಿಂಹ, 9 ಹುಲಿಗಳನ್ನು ತಿಂದಿದ್ದೇನೆ. ಇನ್ನೊಂದು ಹುಲಿಯನ್ನು ತಿನ್ನಬೇಕು, ನೀನೇ ಬಂದೆ" ಎಂದು ಮೇಕೆ ಹೇಳುತ್ತದೆ. ಇದನ್ನು ಕೇಳಿ ಕಾಟುದೇವರ ಮಾತು ನಿಜ ಅಂತ ನಂಬಿದ ಹುಲಿ ಹೆದರಿ ಪಲಾಯನ ಮಾಡಿತು. ಮರುದಿನ ಕುಂಟು ಮೇಕೆ ಕಾಡಿಗೆ ಹುಲ್ಲು ಮೇಯಲು ಬಂದ ರಹೀಮನ ಜೊತೆ ಮನೆಗೆ ಹೋಯಿತು.

ವಿದ್ಯಾರ್ಥಿ ಕಿರುಪರಿಚಯ
ಮಾಸ್ಟರ್. ಹರಿತೇಜ

7ನೇ ತರಗತಿ
ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ,
ಇಟಕದಿಬ್ಬನ ಹಳ್ಳಿ, ಮಧುಗಿರಿ ತಾಲ್ಲೂಕು, ತುಮಕೂರು ಜಿಲ್ಲೆ.

Blog  |  Facebook  |  Twitter

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ