ಚಿತ್ರ ಕೃಪೆ : ಗೂಗಲ್ |
ಕೇಳಿ ಮಕ್ಕಳೆ, ನಾಳಿನ ಪ್ರಜೆಗಳೆ
ಕೇಳಿರಿ ಹೇಳುವೆ ಮಾತೊಂದ
ಸ್ವಾತಂತ್ರ್ಯಕ್ಕಾಗಿ ಹೋರಾಡಿ ಮಡಿದ
ಕಿತ್ತೂರು ರಾಣಿಯ ಕಥೆಯನ್ನ.
ಕೇಳಿರಿ ಹೇಳುವೆ ಮಾತೊಂದ
ಸ್ವಾತಂತ್ರ್ಯಕ್ಕಾಗಿ ಹೋರಾಡಿ ಮಡಿದ
ಕಿತ್ತೂರು ರಾಣಿಯ ಕಥೆಯನ್ನ.
ಬೆಳಗಾವಿ ಜಿಲ್ಲೆಯ ಕಾಕತಿಯಲ್ಲಿ
ವೀರ ಪುತ್ರಿಯು ಜನಿಸಿಹಳು
ದೊಳಪ್ಪ ದೇಸಾಯಿ ಪದ್ಮಾವತಿಯ
ಕುಲಪುತ್ರಿಯೇ ಚೆನ್ನಮ್ಮ.
ವೀರ ಪುತ್ರಿಯು ಜನಿಸಿಹಳು
ದೊಳಪ್ಪ ದೇಸಾಯಿ ಪದ್ಮಾವತಿಯ
ಕುಲಪುತ್ರಿಯೇ ಚೆನ್ನಮ್ಮ.
ತಂದೆಯೊಡನೆ ಪುರುಷ ವೇಷದಿ
ಬೇಟೆಗೆ ಕಾಡಿಗೆ ಹೋಗಿಹಳು
ಕತ್ತಿ ವರಸೆ, ಬಿಲ್ಲು ಬಾಣ
ಕುದುರೆ ಸವಾರಿಯ ಕಲಿತಿಹಳು.
ಕಿತ್ತೂರು ದೊರೆ ಮಲ್ಲಸರ್ಜನ
ಪ್ರೀತಿಯ ಮಡದಿ ಎನಿಸಿಹಳು
ಮಲ್ಲಸರ್ಜನ ಮರಣದ ನಂತರ
ಕಿತ್ತೂರು ರಾಣಿಯೇ ಆಗಿಹಳು.
ಬೇಟೆಗೆ ಕಾಡಿಗೆ ಹೋಗಿಹಳು
ಕತ್ತಿ ವರಸೆ, ಬಿಲ್ಲು ಬಾಣ
ಕುದುರೆ ಸವಾರಿಯ ಕಲಿತಿಹಳು.
ಕಿತ್ತೂರು ದೊರೆ ಮಲ್ಲಸರ್ಜನ
ಪ್ರೀತಿಯ ಮಡದಿ ಎನಿಸಿಹಳು
ಮಲ್ಲಸರ್ಜನ ಮರಣದ ನಂತರ
ಕಿತ್ತೂರು ರಾಣಿಯೇ ಆಗಿಹಳು.
ನಾಡಿನ ಮೇಲೆ ಬ್ರಿಟಿಷರ ದಬ್ಬಾಳಿಕೆಯ
ಧೈರ್ಯದಿ ಎದುರಿಸಿ ಹೋರಾಡಿಹಳು
ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ
ವೀರ ವನಿತೆಯಾಗಿ ಅಮರಳಾಗಿಹಳು.
ಧೈರ್ಯದಿ ಎದುರಿಸಿ ಹೋರಾಡಿಹಳು
ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ
ವೀರ ವನಿತೆಯಾಗಿ ಅಮರಳಾಗಿಹಳು.
ವಿದ್ಯಾರ್ಥಿ ಕಿರುಪರಿಚಯ | |
ಕುಮಾರಿ. ಗೌತಮಿ 5ನೇ ತರಗತಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ, ಇಟಕದಿಬ್ಬನ ಹಳ್ಳಿ, ಮಧುಗಿರಿ ತಾಲ್ಲೂಕು, ತುಮಕೂರು ಜಿಲ್ಲೆ. Blog | Facebook | Twitter |
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ