ಸೋಮವಾರ, ನವೆಂಬರ್ 26, 2018

ಜಾಣ ಕಾಗೆ

ಚಿತ್ರ ಕೃಪೆ : ಗೂಗಲ್

ಒಂದು ದಿನ ಕಾಗೆಗೆ ಬಹಳ ಬಾಯಾರಿಕೆಯಾಗಿತ್ತು. ಅದು ನೀರಿಗಾಗಿ ಹುಡುಕುತ್ತಾ ಹುಡುಕುತ್ತಾ, ಹಾರುತ್ತಾ ಹೊರಟಿತ್ತು. ಬಹಳ ಸುತ್ತಾಡಿದ ಮೇಲೆ ದೂರದಲ್ಲಿ ಒಂದು ಬಿಂದಿಗೆ ಕಾಣಿಸಿತು. ಕಾಗೆಗೆ ಸಂತೋಷ ಉಕ್ಕಿ ಹರಿಯಿತು.

ಸಂತೋಷದಿಂದ ಬಿಂದಿಗೆ ಹತ್ತಿರಕ್ಕೆ ಹಾರುತ್ತಾ ಬಂದಿತು. ಬಿಂದಿಗೆಯ ಮೇಲೆ ಕೂತು, ಒಳಗೆ ಇಣುಕಿ ನೋಡಿತು. ಆದರೆ ನೀರು ಬಿಂದಿಗೆಯ ತಳದಲ್ಲಿ ಇತ್ತು. ಮುಂದೇನು ಮಾಡುವುದು? ಎಂದು ಒಂದು ಕ್ಷಣ ಯೋಚಿಸಿತು. ಕಾಗೆಗೆ ತುಂಬಾ ಬಾಯಾರಿಕೆಯಾಗಿತ್ತು. ನೀರನ್ನು ಕುಡಿಯಲೇಬೇಕಿತ್ತು. ನಿರಾಶೆಯಾಗದೇ ಒಂದು ಉಪಾಯ ಮಾಡಿತು.

ಸಮೀಪದಲ್ಲಿ ಸಣ್ಣ ಸಣ್ಣ ಕಲ್ಲುಗಳು ಬಿದ್ದಿದ್ದವು. ಅವುಗಳನ್ನು ಒಂದೊಂದಾಗಿ ತಂದು ಬಿಂದಿಗೆಯಲ್ಲಿ ಹಾಕಲು ಪ್ರಾರಂಭಿಸಿತು. ಕಲ್ಲುಗಳು ಬಿಂದಿಗೆಯಲ್ಲಿ ತುಂಬುತ್ತಿದ್ದಂತೆ ನೀರು ಮೇಲೆ ಬಂದಿತು. ಸಂತೋಷಗೊಂಡ ಕಾಗೆ ಬಗ್ಗಿ ತನ್ನ ಕೊಕ್ಕಿನಿಂದ ನೀರನ್ನು ಕುಡಿದು ದಾಹವನ್ನು ಇಂಗಿಸಿಕೊಂಡಿತು. ನಂತರ ಹಾಯಾಗಿ ಹಾರುತ್ತಾ ಮುಂದೆ ಮುಂದೆ ಹೊರಟಿತು.

ಸಮಸ್ಯೆ ಬಂದಾಗ ಉಪಾಯದಿಂದ ಎದುರಿಸಬೇಕು.

ವಿದ್ಯಾರ್ಥಿ ಕಿರುಪರಿಚಯ
ಕುಮಾರಿ. ನವ್ಯ

7ನೇ ತರಗತಿ
ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ,
ಇಟಕದಿಬ್ಬನ ಹಳ್ಳಿ, ಮಧುಗಿರಿ ತಾಲ್ಲೂಕು, ತುಮಕೂರು ಜಿಲ್ಲೆ.

Blog  |  Facebook  |  Twitter

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ