ಭಾನುವಾರ, ನವೆಂಬರ್ 26, 2017

ಚುಟುಕಗಳು

ಮನಸೆಂಬ ಮಲ್ಲಿಗೆಯ ಮೇಲೆ
ಕನಸೆಂಬ ಇಬ್ಬನಿ ಹನಿ ಬಿದ್ದು
ನಗುವೆಂಬ ಸುವಾಸನೆ ತುಂಬಿ
ನಿಮ್ಮ ಬಾಳಿಗೆ ಹೊಸ ಚೈತನ್ಯ ತರಲಿ

* * *

ಮನಸ್ಸು ಒಂಥರಾ ವಾಟರ್ ಇದ್ದಹಾಗೆ
ಯಾವಾಗ ಬೇಕಾದ್ರೂ ಛೇಂಜ್ ಆಗುತ್ತೆ;
ನೆನಪು ಹಾಗಲ್ಲ, ಗಾಳಿ ಥರ ಯಾವಾಗ್ಲೂ
ನಮ್ಮ ಉಸಿರಲ್ಲೇ ಇರುತ್ತೆ

* * *

ಅಮ್ಮನ ಪ್ರೀತಿ ಅಮೃತ
ಅಪ್ಪನ ಪ್ರೀತಿ ಅದ್ಭುತ
ಗುರುವಿನ ಪ್ರೀತಿ ನಿಸ್ವಾರ್ಥ
ಲವರ್‌ನ ಪ್ರೀತಿ ಸ್ವಾರ್ಥ
ಬಟ್, ಫ್ರೆಂಡ್ಸ್ ಪ್ರೀತಿ ಶಾಶ್ವತ

* * *

ನೋವು ಇರೋ ಫ್ರೆಂಡ್‌ನ ಪ್ರೀತಿ ಮಾಡಿ
ಆದರೆ ಪ್ರೀತಿ ಮಾಡೋ ಫ್ರೆಂಡ್‌ಗೆ ನೋವು ಕೊಡಬೇಡಿ
ಫ್ರೆಂಡ್‌ಗಾಗಿ ಎಲ್ಲಾ ಸಂತೋಷನ ತ್ಯಾಗ ಮಾಡಿ
ಆದರೆ ಸಂತೋಷಕ್ಕಾಗಿ ಫ್ರೆಂಡ್‌ನ ತ್ಯಾಗ ಮಾಡ್ಬೇಡಿ

* * *

ನೋವಿನಲ್ಲಿ ಜೊತೆಯಾಗಿ
ನಗುವಿನಲ್ಲಿ ಖುಷಿಯಾಗಿ
ಅಳುವಿನಲ್ಲಿ ಕಣ್ಣೀರಾಗಿ
ಪ್ರತಿ ನಿಮಿಷದಲ್ಲೂ ನಿಮ್ಮ ಸ್ನೇಹಕ್ಕಾಗಿ
ಕಾಯುತ್ತಿರುವ ಪುಟ್ಟ ಹೃದಯವಿದು


( ಬರೆಹದ ಹಸ್ತಾಕ್ಷರ ಪ್ರತಿಯನ್ನು ಇಲ್ಲಿ ಓದಿರಿ )

ಲೇಖಕರ ಕಿರುಪರಿಚಯ
ಮಾಸ್ಟರ್. ಯಶವಂತ್, ಎಲ್.

7ನೇ ತರಗತಿ
ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ
ಓಬಳಾಪುರ, ನೆಲಮಂಗಲ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ.

Blog  |  Facebook  |  Twitter

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ