ಚಿತ್ರ ಕೃಪೆ : Google |
ನೇತಾಜಿ ಸುಭಾಷ್ ಚಂದ್ರ ಬೋಸರು ಬಂಗಾಲ ರಾಜ್ಯದ ಕಟಕ್ ಎಂಬಲ್ಲಿ 1897 ರಲ್ಲಿ ಜನಿಸಿದರು. ಅವರ ತಂದೆಯ ಹೆಸರು ಜಾನಕೀನಾಥ ಬೋಸ್. ಅವರು ಪ್ರಸಿದ್ಧ ವಕೀಲರು. ಸುಭಾಷರು ಚಿಕ್ಕವರಿದ್ದಾಗ ಓದು-ಬರಹದಲ್ಲಿ ಒಳ್ಳೆಯ ಹಾಗೂ ಜಾಣ ಹುಡುಗನೆಂದು ಹೆಸರಾಗಿದ್ದರು. ಉತ್ತಮ ಆಟಗಾರನೆಂದೂ ಪ್ರಸಿದ್ಧರಾಗಿದ್ದರು. ಅವರು ಸ್ವಾಭಿಮಾನಿಯಾಗಿದ್ದರು.
ಸುಭಾಷ್ ಚಂದ್ರ ಬೋಸರು ಇಂಗ್ಲೆಂಡಿಗೆ ಹೋಗಿ ಐ.ಸಿ.ಎಸ್. (ಇಂಡಿಯನ್ ಸಿವಿಲ್ ಸರ್ವೀಸ್) ಪರೀಕ್ಷೆ ಪಾಸಾಗಿ ಭಾರತಕ್ಕೆ ಮರಳಿದರು. ಭಾರತದಲ್ಲಿ ಹಿರಿಯ ಅಧಿಕಾರ ಸ್ಥಳಗಳು ಅವರಿಗಾಗಿ ಕಾದಿದ್ದವು. ಪರಕೀಯ ಭಾರತದ ಪರಿಸ್ಥಿತಿ ಕಂಡು ದೇಶಕ್ಕೆ ಸ್ವಾತಂತ್ರ್ಯ ದೊರಕಿಸಲು ಮುಂದಾದ ಸುಭಾಷ್ ಚಂದ್ರರು, ಪೋಲೀಸರ ಕಣ್ಣು ತಪ್ಪಿಸಿ ವಿದೇಶಗಳಿಗೆ ಹೋದರು. ಸಿಂಗಾಪುರ, ಮಲೇಶಿಯಾ, ಬರ್ಮ ದೇಶಗಳಲ್ಲಿ ವಾಸಿಸುತ್ತಿದ್ದ ಭಾರತೀಯರು ಅವರಿಗೆ ನೆರವು ನೀಡಿದರು.
ಆಝಾದ್ ಹಿಂದ್ ಫೌಜ್ ನ ಶೂರ ಸೈನಿಕರು ನೇತಾಜಿಯ ಮುಂದಾಳುತನದಲ್ಲಿ ಧೈರ್ಯದಿಂದ ಕಾದಾಡಿದರು. ಕ್ರಿ.ಶ. 1942 ಜುಲೈ 5 ರಂದು ವಿಮಾನ ಅಪಘಾತದಲ್ಲಿ ನೇತಾಜಿ ಮರಣ ಹೊಂದಿದರು. ಅವರ ಸಾಹಸ, ಎದೆಗಾರಿಕೆ, ಬುದ್ಧಿವಂತಿಕೆಗಳಿಂದ ಬ್ರಿಟಿಷರ ಸಾಮ್ರಾಜ್ಯದ ಅಡಿಗಲ್ಲೇ ಕಂಪಿಸಿತು. ಸುಭಾಷರು ಕೆಚ್ಚೆದೆಯ ಸ್ವಾತಂತ್ರ್ಯ ಯೋಧರೆಂದು ಚಿರಕಾಲ ನಮ್ಮ ನೆನಪಿನಲ್ಲಿ ಇರುವರು.
( ಬರೆಹದ ಹಸ್ತಾಕ್ಷರ ಪ್ರತಿಯನ್ನು ಇಲ್ಲಿ ಓದಿರಿ )
ಲೇಖಕರ ಕಿರುಪರಿಚಯ | |
ಕುಮಾರಿ. ಅಶ್ವಿನಿ, ಹೆಚ್. 7ನೇ ತರಗತಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಓಬಳಾಪುರ, ನೆಲಮಂಗಲ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ. Blog | Facebook | Twitter |
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ