ಭಾನುವಾರ, ನವೆಂಬರ್ 19, 2017

ಕವನಗಳು

ಆಕಾಶವೆಂಬ ಸಾಗರದಲ್ಲಿ
ಚಂದ್ರನಂತ ದೋಣಿಯಲ್ಲಿ
ಸಾಗಲಿ ನನ್ನ ನಿನ್ನ ಗೆಳೆತನ.

* * *

ಸ್ನೇಹವನ್ನು ಅಳಿಸೋದು ಕಷ್ಟ.
ಅಳಿಸಿದ ಸ್ನೇಹವನ್ನು
ಬೆಳೆಸೋದು ಬಲು ಕಷ್ಟ.
ಬೆಳೆದ ಸ್ನೇಹವನ್ನು
ಕೊನೆತನಕ ಉಳಿಸೋದಂದ್ರೆ
ನನಗಿಷ್ಟ.

* * *

ಹುಟ್ಟುವಾಗ ಅಮ್ಮ,
ಅಳುವಾಗ ಅಮ್ಮ,
ನಗುವಾಗ ಅಮ್ಮ,
ನಾವು ಎಲ್ಲಿದ್ರೂ ನಮ್ಮ
ಜೊತೆ ಇರ್ತಾಮಳೆ ಅಮ್ಮ.
ಕಾರಣ ಅವಳಿಂದಲೇ ಸಿಕ್ಕಿದೆ
ನಮಗೆ ಈ ಜೀವನ.

* * *

ನೀನು ಕರೆದ್ರೆ ಹತ್ತು ಜನ,
ನಾನು ಕರೀದೇನೆ ಇಷ್ಟು ಜನ.
ಇನ್ನು ನಾನು ಕರೆದ್ರೆ ಇಡೀ
ಕರ್ನಾಟಕವೇ ನನ್ನ ಹಿಂದೆ ಇರುತ್ತೆ.

* * *

ಕಣ್ಣಿಗೆ ಕಾಣಿಸದ ದೇವರನ್ನು
ಪೂಜಿಸುವ ಮುನ್ನ
ಕಣ್ಣಿಗೆ ಕಾಣುವ
ತಾಯಿಯನ್ನು ಪೂಜಿಸು.

* * *

ಬಡ ಮಕ್ಕಳಿಗೆ ಬೇಕು ಸ್ಕಾಲರ್‌ಶಿಪ್,
ಆಟಗಾರರಿಗೆ ಬೇಕು ಚಾಂಪಿಯನ್‌ಶಿಪ್.
ನನಗೆ ಬೇಕು ನಿಮ್ಮ ಫ್ರೆಂಡ್‌ಶಿಪ್.

* * *

ಸಿಪಾಯಿ ದಂಗೆಗೆ ಮೊದಲು
ಬ್ರಿಟೀಷರ ವಿರುದ್ಧ ಸ್ವಾತಂತ್ರ್ಯ
ಸಮರ ಸಾರಿದ ವೀರಯೋಧ
ಸಂಗೊಳ್ಳಿರಾಯಣ್ಣ.


( ಬರೆಹದ ಹಸ್ತಾಕ್ಷರ ಪ್ರತಿಯನ್ನು ಇಲ್ಲಿ ಓದಿರಿ )

ಲೇಖಕರ ಕಿರುಪರಿಚಯ
ಕುಮಾರಿ. ಸುನೀತ, ಟಿ. ಸಿ.

8ನೇ ತರಗತಿ
ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ
ಓಬಳಾಪುರ, ನೆಲಮಂಗಲ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ.

Blog  |  Facebook  |  Twitter

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ