ಶುಕ್ರವಾರ, ನವೆಂಬರ್ 17, 2017

ನಮ್ಮ ಭಾಷೆ ಕನ್ನಡ

ಕನ್ನಡ ನಾಡು ಕನ್ನಡಿಗರ ನಾಡು. ಅದು ಹರಿದು ಚಿಂದಿಯಾದ ಕಾಲವೊಂದಿತ್ತು. ಕನ್ನಡಿಗರು ಚಳುವಳಿಯ ಮೂಲಕ ನ್ಯಾಯ ಪಡೆಯಲು ಹೋರಾಟ ನಡೆಸಿದರು. ಅಂದಿನ ಏಕೀಕರಣ ಚಳುವಳಿಯನ್ನು ಇಂದೂ ನಾವು ಸ್ಮರಿಸಿಕೊಳ್ಳಬೇಕು. ಕನ್ನಡ ನಾಡಿಗೆ ಇತರೆ ಭಾಷಿಕರಿಂದ ಪದೇ ಪದೇ ಆಘಾತ ಒದಗಿಬಂದಿರುವುದು ಗಮನಿಸುತ್ತಾ ಬಂದಿದ್ದೇವೆ.
ಕನ್ನಡಿಗರಾದ ನಾವು ಕನ್ನಡ ನಾಡು, ಕನ್ನಡಿಗರ ನಾಡು ಎಂದು ಅರಿತು ಬದುಕಬೇಕು. ಮಾತೃ ಭಾಷೆಗೆ ಅನ್ಯಾಯವಾದಾಗ ಒಕ್ಕೂರಲಿನಿಂದ ಪ್ರತಿಭಟಿಸಬೇಕು.

ಕನ್ನಡ ನಾಡ ಮಾನವರಾದ ನಾವು ಪ್ರಕೃತಿಯಿಂದ ಕಲಿಯಬೇಕಾದದು ಅಪಾರ. ಪ್ರಕೃತಿಯ ಪ್ರತಿಯೊಂದು ವಸ್ತುವೂ ಪರಸ್ಪರ ಸಂಬಂಧವುಳ್ಳದ್ದಾಗಿರುತ್ತವೆ. ಅಂತೆಯೇ ಋತುಮಾನಗಳೂ ಕೂಡ. ಅವು ಬದಲಾದಂತೆ ಹವಾಮಾನವೂ ಏರುಪೇರಾಗುತ್ತಿರುತ್ತದೆ. ಒಮ್ಮೆ ಪ್ರಖರವಾದ ಬಿಸಿಲು, ಮತ್ತೊಮ್ಮೆ ಗಡಗಡ ನಡುಗುವ ಚಳಿ, ಮಳೆ, ಗಾಳಿ ಹೀಗೆ ಏನೇ ಆದರೂ ಯಾವುದೇ ಕೆಲಸ ಕಾರ್ಯಗಳು ನಿಲ್ಲುವುದಿಲ್ಲ. ಹೊಸಗನ್ನಡ ಸಾಹಿತ್ಯವು ನವೋದಯ, ಪ್ರಗತಿಶೀಲ, ದಲಿತ-ಬಂಡಾಯ, ಮಹಿಳಾ ಸಾಹಿತ್ಯ ಎಂಬ ವಿವಿಧ ದೃಷ್ಠಿಕೋನಗಳಲ್ಲಿ ಬೆಳೆದು ಬಂದಿದೆ. ದಲಿತರು ತಮ್ಮ ಬದುಕಿನ ಶೋಷಣೆ ನೋವುಗಳನ್ನು ಹಾಡಾಗಿ ಹೊಮ್ಮಿಸಿದ್ದೇ ದಲಿತ ಸಾಹಿತ್ಯ. ಸ್ವಾತಂತ್ರ್ಯ, ಸಂವಿಧಾನ ಬಂದರೂ ದಲಿತರ ಬದುಕು ಇನ್ನೂ ಬದಲಾಗಲಿಲ್ಲ ಎಂಬ ನೋವಿದೆ.

ಎಲ್ಲಾದರು ಇರು, ಎಂತಾದರು ಇರು; ಎಂದೆಂದಿಗು ನೀ ಕನ್ನಡವಾಗಿರು.

ಕನ್ನಡಕ್ಕಾಗಿ ಕೈ ಎತ್ತು, ನಿನ್ನ ಕೈ ಕಲ್ಪವೃಕ್ಷವಾಗುತ್ತದೆ.

ನಾವೆಲ್ಲೇ ಹೋದರೂ ನಮ್ಮ ಕನ್ನಡ ನಾಡನ್ನು ಮರೆಯಬಾರದು.

ಕನ್ನಡ ನಾಡು, ಕನ್ನಡಿಗರ ನಾಡು.


( ಬರೆಹದ ಹಸ್ತಾಕ್ಷರ ಪ್ರತಿಯನ್ನು ಇಲ್ಲಿ ಓದಿರಿ )

ಲೇಖಕರ ಕಿರುಪರಿಚಯ
ಮಾಸ್ಟರ್. ಆನಂದ್, ಎಸ್. ವಿ.

7ನೇ ತರಗತಿ
ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ
ಓಬಳಾಪುರ, ನೆಲಮಂಗಲ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ.

Blog  |  Facebook  |  Twitter

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ