ಗುರುವಾರ, ನವೆಂಬರ್ 23, 2017

ಪಂಡಿತ್ ಜವಾಹರಲಾಲ್ ನೆಹರು

ಚಿತ್ರ ಕೃಪೆ : Google
ನೆಹರು ಅವರನ್ನು ಮಕ್ಕಳು ಚಾಚಾ ಎಂದು ಕರೆಯುತ್ತಾರೆ. ಅವರ ಪೂರ್ಣ ಹೆಸರು ಜವಾಹರಲಾಲ್ ಮೋತಿಲಾಲ್ ನೆಹರು. ಅವರು ಉತ್ತರ ಪ್ರದೇಶದ ಅಲಹಾಬಾದ್ ನಲ್ಲಿ 1889ರ ನವೆಂಬರ್ 14 ರಂದು ಜನಿಸಿದರು. ತಂದೆ ಮೋತಿಲಾಲ್ ನೆಹರು ಪ್ರಸಿದ್ಧ ವಕೀಲರಾಗಿದ್ದರು. ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಸೇರಿ ಕಾರ್ಯ ಮಾಡಿದವರಾಗಿದ್ದಾರೆ.

ಜವಾಹರಲಾಲ್ ನೆಹರು ಅವರ ಪ್ರಾಧಮಿಕ ಶಿಕ್ಷಣ ಮನೆಯಲ್ಲಿ ನಡೆಯಿತು. ಮುಂದೆ ಮಾಧ್ಯಮಿಕ ಶಿಕ್ಷಣ ಮುಗಿಸಿ, ಇಂಗ್ಲೆಂಡಿಗೆ ಹೋಗಿ ಬ್ಯಾರಿಸ್ಟರ್ ಪದವಿ ಪಡೆದರು. ಸ್ವದೇಶಕ್ಕೆ ಬಂದ ಮೇಲೆ ಸ್ವಾತಂತ್ರ್ಯ ಚಳುವಳಿಯಲ್ಲಿ ಸೇರಬೇಕೆಂಬ ಪ್ರೇರಣೆ ತಂದೆಯವರಿಂದ ದೊರಕಿತು. ಅಲ್ಲದೇ ಗಾಂಧೀಜಿಯವರ ಆಪ್ತ ಅನುಯಾಯಿಯಾಗಿದ್ದರು. ಕಾಂಗ್ರೆಸ್ ಸಂಸ್ಥೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಅನೇಕ ಬಾರಿ ಸೆರೆಮನೆವಾಸ ಅನುಭವಿಸಿದರು.

ಭಾರತ ಸ್ವತಂತ್ರವಾದ ಮೇಲೆ ಅವರು ಭಾರತದ ಮೊದಲನೆಯ ಪ್ರಧಾನ ಮಂತ್ರಿಗಳಾಗಿ ಕಾರ್ಯ ಮಾಡಿದರು. ಅವರು 'ಆರಾಮ ಹಾರಾಮ ಹೈ' ಎಂದು ಜನತೆಗೆ ಹೇಳುತ್ತಿದ್ದರು. ಅವರು 1964ರ ಮೇ 27 ರಂದು ನಿಧನ ಹೊಂದಿದರು. ದೇಶವಿದೇಶಗಳಲ್ಲಿ ಭಾರತದ ಹಿರಿಮೆ ಹೆಚ್ಚುವಂತೆ ದುಡಿದ ಮಹಾಮಹಿಮರು ಇವರಾಗಿದ್ದಾರೆ. ಇವರು ವಿಶ್ವದಲ್ಲಿ 'ಶಾಂತಿದೂತ' ಎಂದು ಹೆಸರಾಗಿದ್ದಾರೆ.

( ಬರೆಹದ ಹಸ್ತಾಕ್ಷರ ಪ್ರತಿಯನ್ನು ಇಲ್ಲಿ ಓದಿರಿ )

ಲೇಖಕರ ಕಿರುಪರಿಚಯ
ಕುಮಾರಿ. ಕವನ, ಎಸ್.

7ನೇ ತರಗತಿ
ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ
ಓಬಳಾಪುರ, ನೆಲಮಂಗಲ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ.

Blog  |  Facebook  |  Twitter

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ