ಕತ್ತಲು ಬೆಳಕಾಗುವ ತನಕ
ಬೆಳಕು ಕತ್ತಲಾಗುವ ತನಕ
ಗೆಳೆತನ ಸಾಯುವ ತನಕ.
ಬೆಳಕು ಕತ್ತಲಾಗುವ ತನಕ
ಗೆಳೆತನ ಸಾಯುವ ತನಕ.
* * *
ಮನಸ್ಸಿಗಿಂತ ಹೆಚ್ಚು
ಸ್ನೇಹ
ಜೀವಕ್ಕಿಂತ ಹೆಚ್ಚು
ಪ್ರೀತಿ.
* * *
ವಿದ್ಯೆ ಎಂಬ ಗಿಡದಲ್ಲಿ
ವಿದ್ಯಾರ್ಥಿಯೇ ದುಂಬಿ.
* * *
ಬಡತನ ಎಂಬುದು ಕತ್ತಲೆಯ
ರೂಪ
ಸಿರಿತನ ಎಂಬುದು ಬೆಳಕಿನ
ರೂಪ
ಸ್ನೇಹ ಎಂಬುದು ಶಾಶ್ವತ
ರೂಪ
* * *
ಪ್ರೀತಿನಾ
ಪ್ರೀತಿಯಿಂದನೆ
ಪ್ರೀತಿಸು.
* * *
ಗುಲಾಬಿ ಹೂವಿಗೆ ಮುಳ್ಳು ಆಸರೆ
ಅದರೆ ನನಗೆ ಸ್ನೇಹವೇ ಆಸರೆ.
* * *
ಭೂಮಿ ನಕ್ಕರೆ ಭೂಕಂಪ
ಸಾಗರ ನಕ್ಕರೆ ಸುನಾಮಿ
ಮಗು ನಕ್ಕರೆ ಮಲ್ಲಿಗೆ
ನೀನು ನಕ್ಕರೆ ಚಿಂಪಾಂಜಿ
ನಾನು ನಕ್ಕರೆ ಅಪರಂಜಿ.
* * *
ಬೇವು – ಬೆಲ್ಲ
ಬೇವು ಕಹಿ
ಬೆಲ್ಲ ಸಿಹಿ
ನಮ್ಮೆಲ್ಲರ ಜೀವನವು ಬೇವು – ಬೆಲ್ಲ.
( ಬರೆಹದ ಹಸ್ತಾಕ್ಷರ ಪ್ರತಿಯನ್ನು ಇಲ್ಲಿ ಓದಿರಿ )
ಲೇಖಕರ ಕಿರುಪರಿಚಯ | |
![]() | ಕುಮಾರಿ. ಸೌಮ್ಯ, ಜಿ. 6ನೇ ತರಗತಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಓಬಳಾಪುರ, ನೆಲಮಂಗಲ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ. Blog | Facebook | Twitter |
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ