ಗುರುವಾರ, ನವೆಂಬರ್ 9, 2017

ಗಾದೆಗಳು

  1. ಉಪ್ಪಿಗಿಂತ ರುಚಿಯಿಲ್ಲ; ತಾಯಿಗಿಂತ ಬಂಧುವಿಲ್ಲ.
  2. ಉತ್ತರನ ಪೌರುಷ ಒಲೆಯ ಮುಂದೆ.
  3. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ ?
  4. ಬೆಳ್ಳಗಿರುವುದೆಲ್ಲಾ ಹಾಲಲ್ಲ.
  5. ತುಂಬಿದ ಕೊಡ ತುಳುಕುವುದಿಲ್ಲ.
  6. ವಿದ್ಯೆಗೆ ವಿನಯವೇ ಭೂಷಣ.
  7. ಹುಟ್ಟುತ್ತಾ ಅಣ್ಣತಮ್ಮಂದಿರು; ಬೆಳೆಯುತ್ತಾ ದಾಯಾದಿಗಳು.
  8. ಕೆಟ್ಟಮೇಲೆ ಬುದ್ಧಿ ಬಂತು.
  9. ಮನೆಗೆ ಮಾರಿ; ಊರಿಗೆ ಉಪಕಾರಿ.
  10. ಕೈ ಕೆಸರಾದರೆ, ಬಾಯಿ ಮೊಸರು.
  11. ಅಡಿಕೆಗೆ ಹೋದ ಮಾನ, ಆನೆ ಕೊಟ್ಟರೂ ಬಾರದು.
  12. ಮಾಡುವುದೆಲ್ಲಾ ಅನಾಚಾರ; ಮನೆ ಮುಂದೆ ಮಾತ್ರ ಬೃಂದಾವನ.
  13. ಅತಿ ಆಸೆ ಗತಿಗೇಡು.
  14. ಹಿತ್ತಲ ಗಿಡ ಮದ್ದಲ್ಲ.
  15. ಹಾಸಿಗೆ ಇದ್ದಷ್ಟು ಕಾಲು ಚಾಚು.
  16. ಒಗ್ಗಟ್ಟಿನಲ್ಲಿ ಬಲವಿದೆ.
  17. ಆರೋಗ್ಯವೇ ಭಾಗ್ಯ.
  18. ಬೆಳೆಯುವ ಸಿರಿ ಮೊಳಕೆಯಲ್ಲಿ.
  19. ಕುಂಬಾರನಿಗೆ ವರುಷ; ದೊಣ್ಣೆಗೆ ನಿಮಿಷ.
  20. ಮಿಂಚಿ ಹೋದ ಕಾರ್ಯಕ್ಕೆ ಚಿಂತಿಸಿ ಫಲವೇನು ?
  21. ಮಾಡಿದ್ದುಣ್ಣೋ ಮಹರಾಯ.
  22. ಗಾಳಿ ಬಂದಂತೆ ತೂರಿಕೋ.
  23. ಮಾತು ಮನೆ ಕೆಡಿಸಿತು, ತೂತು ಒಲೆ ಕೆಡಿಸಿತು.
  24. ಮಾತು ಬೆಳ್ಳಿ, ಮೌನ ಬಂಗಾರ.
  25. ತಾಳಿದವನು ಬಾಳಿಯಾನು.
  26. ಕಣ್ಣಿರುವ ತನಕ ನೋಟ; ಕಾಲಿರುವ ತನಕ ಓಟ.

( ಬರೆಹದ ಹಸ್ತಾಕ್ಷರ ಪ್ರತಿಯನ್ನು ಇಲ್ಲಿ ಓದಿರಿ )

ಲೇಖಕರ ಕಿರುಪರಿಚಯ
ಕುಮಾರಿ. ಲಕ್ಷ್ಮಿ, ಆರ್.

6ನೇ ತರಗತಿ
ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ
ಓಬಳಾಪುರ, ನೆಲಮಂಗಲ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ.

Blog  |  Facebook  |  Twitter

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ