ಗುರುವಾರ, ನವೆಂಬರ್ 21, 2019

ಕನ್ನಡ ಕನ್ನಡ ಬರ್ರಿ ನಮ್ಮ ಸಂಗಡ

ಎಲ್ಲೆಲ್ಲೂ ಉಸಿರಬೇಕು
ನಮ್ಮ ನುಡಿ ಕನ್ನಡ
ಸಿರಿನಾಡನು ಕಟ್ಟಲಿಕ್ಕೆ
ಬರ್ರಿ ನಮ್ಮ ಸಂಗಡ

ಕೈಯ ತುಂಬ ಕೆಲಸ ಬೇಕು
ಬೇಕು ಹೊಟ್ಟೆಗನ್ನ
ಅಕ್ಷರಗಳ ಕನ್ನ ಕೊರೆದು
ಬರಲಿ ಅರಿವು-ಚಿನ್ನ

ಮೈಯ ತುಂಬ ಬಟ್ಟೆ ಬೇಕು
ನೆತ್ತಿಗೊಂದು ಆಸರ
ಭೂಮಿ ತುಂಬ ಬಿತ್ತಬೇಕು
ತನ್ನ ಬೆಳಕು ನೇಸರ

ತಲೆಯ ತುಂಬ ಬೆಂಕಿ ತುಂಬಿ
ಮಿಂಚಬೇಕು ಕಂಗಳು
ಎದೆಯ ತುಂಬಿ ತುಳುಕಬೇಕು
ಪ್ರೀತಿಯ ಬೆಳದಿಂಗಳು

ಇಂಥ ನಾಡು ಕಟ್ಟಬೇಕು
ಬರ್ರಿ ನಮ್ಮ ಸಂಗಡ
ಎಲ್ಲೆಲ್ಲೂ ಮೊಳಗಬೇಕು
ಕನ್ನಡ ಕನ್ನಡ ಕನ್ನಡ

ರಚನೆ: ಚಂದ್ರಶೇಖರ ಪಾಟೀಲ

ವಿದ್ಯಾರ್ಥಿ ಕಿರುಪರಿಚಯ
ಬಿಂದು, ಟಿ. ಎಂ.

7ನೇ ತರಗತಿ
ಜ್ಯೋತಿ ವಿದ್ಯಾಲಯ ಶಿಕ್ಷಣ ಸಂಸ್ಥೆ,
ಹೆಸರಘಟ್ಟ, ಬೆಂಗಳೂರು ಉತ್ತರ ತಾಲ್ಲೂಕು, ಬೆಂಗಳೂರು ನಗರ ಜಿಲ್ಲೆ.

Blog  |  Facebook  |  Twitter

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ