ಶುಕ್ರವಾರ, ನವೆಂಬರ್ 29, 2019

ಜಾನಪದ ಕಲೆಗಳು

  ಕಂಸಾಳೆ
ಕೃಪೆ: YouTube

ಕರ್ನಾಟಕದ ಜಾನಪದ ಕಲೆ ಸಂಸ್ಕೃತಿ ಶ್ರೀಮಂತವಾದುದು. ನಶಿಸಿಹೋಗುತ್ತಿರುವ ಈ ಕಲಾಪ್ರಕಾರದ ಮಹತ್ವ ಹಾಗೂ ಅದರ ವಿಶೇಷತೆಯ ಸಂಕ್ಷಿಪ್ತ ವಿವರಗಳನ್ನು ತಿಳಿದುಕೊಳ್ಳೋಣ. ನಮ್ಮ ಭವ್ಯ ಸಾಂಸ್ಕೃತಿಕ ಪರಂಪರೆಯ ಪರಿಚಯ ನಾಡಿನ ಪ್ರತಿಯೊಬ್ಬ ನಾಗರಿಕರಿಗೂ ಅರಿವಿರಬೇಕಾದುದು ಅಗತ್ಯ.

ನಂದೀಧ್ವಜ ಕುಣಿತ: ನಂದೀಧ್ವಜವನ್ನು ನಂದೀಕಂಬ, ನಂದೀಕೋಲು, ವ್ಯಾಸಗೋಲು, ನಂದೀಪಟವೆಂದೂ ಕರೆಯುತ್ತಾರೆ. ಕೊಡಗು ಕರಾವಳಿಯಲ್ಲಿ ಬಿಟ್ಟರೆ ಕರ್ನಾಟಕದ ಬಹುತೇಕ ಭಾಗಗಳಲ್ಲಿ ಈ ಕಲೆ ರೂಢಿಯಲ್ಲಿದೆ.

ವೀರಗಾಸೆ: ಶೈವ ಸಂಪ್ರದಯದ ಒಂದು ಮಹತ್ವಪೂರ್ಣ ಕಲೆ ವೀರಗಾಸೆ. ದಕ್ಷ ಬ್ರಹ್ಮನ ಯಜ್ಞವನ್ನು ಧ್ವಂಸಮಾಡಿ ಬಂದ ವೀರಭದ್ರನ ವಿಜೃಂಭಣೆಯೇ ವೀರಗಾಸೆ.

ಕೊಂಬು ಕಹಳೆ: ನಮ್ಮ ನಾಡಿನ ಹಳ್ಳಿಗಳಲ್ಲಿ ಬಳಕೆಯಲ್ಲಿರುವ ವಾದ್ಯಗಳ ಗುಂಪುಗಳಲ್ಲಿ ಕೊಂಬು ಕಹಳೆಗಳಿಗೆ ಮೊದಲನೇ ಸ್ಥಾನ. ಜಾತ್ರೆ ಉತ್ಸವದಲ್ಲಿ ಎಲ್ಲಾ ವಾದ್ಯಗಳಿಗೂ ಮೊದಲು ಕೊಂಬು ಕಹಳೆ ಮೊಳಗಲೇಬೇಕು.

ಬೀಸು ಕಂಸಾಳೆ: ಏಳು ಬೆಟ್ಟದ ಸಾಲುಗಳ ಸುಂದರ ಮಲೆಗಳನ್ನು ತಾಣವನ್ನಾಗಿ ಮಾಡಿಕೊಂಡಿರುವ ಮಹದೇಶ್ವರನ ಪರಮ ಭಕ್ತರು ಗುಡ್ಡರು. ಸ್ವಾಮಿಯ ಆರಾಧನೆಗಾಗಿ ಕಂಚಿನ ಅಥವಾ ಹಿತ್ತಾಳೆಯ ತಾಳ ಹಿಡಿದು ಹಾಡುವುದೇ "ಕಂಸಾಳೆ". ಬೀಸು ತಾಳದೊಂದಿಗೆ ಕುಣಿಯುವುದೇ "ಬೀಸು ಕಂಸಾಳೆ".

ಪಟ ಕುಣಿತ: ಬಣ್ಣ ಬಣ್ಣದ ಬಟ್ಟೆಯ ಸುತ್ತಿ, ಅದರ ಮೇಲೆ ರೇಷ್ಮೆ ಜಾಲರಿ ಕಟ್ಟಿ, ತುತ್ತ ತುದಿಗೆ ಬಣ್ಣದ ಕುಚ್ಚು ಅಲಂಕಾರ ಮಾಡಿದ ಹದಿನೈದು-ಇಪ್ಪತ್ತು ಅಡಿ ಎತ್ತರದ ಬಿದಿರಿನ ಜವಳಿಯ ಕೋಲನ್ನು ಕೈಯಲ್ಲಿ ಹಿಡಿದು ವಾದ್ಯದ ಲಯಕ್ಕೆ ಕುಣಿಯುವ ಒಂದು ಕಲೆ ಪಟದ ಕುಣಿತ.

ಕೀಲು ಕುದುರೆ: ಇದು ಕರ್ನಾಟಕದ ನಾನಾ ಭಾಗಗಳಲ್ಲಿ ಪ್ರಚಲಿತವಿರುವ ಜನಪ್ರಿಯ ಕುಣಿತ. ಕೊಡಗಿನಲ್ಲಿ ಇದನ್ನು ಪೋಯಾ ಕುದುರೆ ಎನ್ನುತ್ತಾರೆ. ಕೀಲು ಕುದುರೆಗಳನ್ನು ಮುಖ್ಯವಾಗಿ ಬಿದಿರಿನ ದಬ್ಬೆಗಳಿಂದ ರಚಿಸಿರುತ್ತಾರೆ.

ಹೆಜ್ಜೆ ಮೇಳ: ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ, ಅದರಲ್ಲೂ ರಾಯಚೂರು ಜಿಲ್ಲೆಯಲ್ಲಿ ಮೊಹರಂ ಹಬ್ಬದ ಸಂದರ್ಭದ ಒಂದು ವಿಶೇಷ ಕುಣಿತ "ಹೆಜ್ಜೆ ಮೇಳ". ಇದು ದಕ್ಷಿಣ ಕರ್ನಾಟಕದ ಸುಗ್ಗಿಯ ಕುಣಿತವನ್ನು ಹೋಲುತ್ತದೆ. ಇದು ಮುಸ್ಲಿಂ ಹಬ್ಬದ ಕುಣಿತವಾದರೂ ಹಿಂದೂಗಳು ಈ ಮೇಳದಲ್ಲಿ ಪಾಲ್ಗೊಳ್ಳುತ್ತಾರೆ.

ಸುಗ್ಗಿ ಕುಣಿತ: ನಾಡಿನ ನಾನಾ ಭಾಗಗಳಲ್ಲಿ ಸುಗ್ಗಿ ಕುಣಿತ ಕಲೆ ಪ್ರಚಲಿತದಲ್ಲಿದೆ. ವರ್ಷವೆಲ್ಲ ಬೆವರು ಸುರಿಸಿ ದುಡಿದ ಫಲ ಕೈಗೆ ಸಿಕ್ಕುವ ಹಿಗ್ಗಿನ ಕಾಲ ಸುಗ್ಗಿನ ಕಾಲ ಸುಗ್ಗಿಯ ಕಾಲ. ಕಾಮನ ಹುಣ್ಣಿಮೆಯ ಸಂದರ್ಭದಲ್ಲಿ ಈ ಕಲೆಯ ಪ್ರದರ್ಶನವಾಗುತ್ತದೆ.

ತಮಟೆ ಮೇಳ: ಹಳ್ಳಿ ಎಂದರೆ ತಮಟೆ ಇರಲೇಬೇಕು. ತಮಟೆಗೆ ತಪ್ಪಟೆ, ಹಲಗೆ ಎಂದೂ ಕರೆಯುತ್ತಾರೆ. ಹಲಗೆ ವಾದ್ಯವು ಬಹಳ ಸರಳ. ವೃತ್ತಾಕಾರದ ಮರದ ಬಳೆಗೆ ಹದಗೊಳಿಸಿ ನಯಗೊಳಿಸಿದ ಚರ್ಮವನ್ನು ಬಿಗಿದು ತಮಟೆ ತಯಾರಿಸಲಾಗುತ್ತದೆ.

ವಿದ್ಯಾರ್ಥಿ ಕಿರುಪರಿಚಯ
ವರ್ಷ, ಎಸ್.

7ನೇ ತರಗತಿ
ಜ್ಯೋತಿ ವಿದ್ಯಾಲಯ ಶಿಕ್ಷಣ ಸಂಸ್ಥೆ,
ಹೆಸರಘಟ್ಟ, ಬೆಂಗಳೂರು ಉತ್ತರ ತಾಲ್ಲೂಕು, ಬೆಂಗಳೂರು ನಗರ ಜಿಲ್ಲೆ.

Blog  |  Facebook  |  Twitter

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ