ಬುಧವಾರ, ನವೆಂಬರ್ 13, 2019

ಜಾನಪದ ಗೀತೆ


ಬಂಗಾರ ಬಳೆತೊಟ್ಟು ಬೈಬ್ಯಾಡ ಬಡವರನ
ಬಂಗಾರ ನಿನಗೆ ಸ್ಥಿರವಲ್ಲ | ಮಧ್ಯಾಹ್ನದ
ಬಿಸಿಲು ಹೊಳ್ಳೋದು ತಡವಲ್ಲ

ಬಡತನ ಬಂದಾರ ಬಡಿಬ್ಯಾಡ ಬಾಲರನ
ಆಡ್ಯಾಡಿ ಬಂದು ತೊಡಿಮ್ಯಾಲ | ಆಡಿದರ
ಬಡತನವೆಲ್ಲ ಬಯಲಾಗ

ಉತ್ತಮರ ಗೆಳೆತನ ಪುತ್ಥಳಿ ಬಂಗಾರ
ಮತ್ತೆ ಹೀನರ ಗೆಳೆತನ | ಮಾಡಿದರ
ಹಿತ್ತಾಳೆಗಿಂತ ಬಲುಹೀನ

ಇದ್ದರ ಇರಬೇಕು ಬುದ್ಧಿವಂತರ ನೆರೆಯ
ಖದ್ದರಗೇಡಿ ಇರಬೇಕು ಕುಲಗೇಡಿ | ನೆರೆಯಿದ್ದು
ಇದ್ದಟ್ಟು ಬುದ್ಧಿ ಕಳಕೊಂಡ

ಮಂದಿ ಮಕ್ಕಳೊಳಗ ಒಂದಾಗೊಂದಿರಬೇಕ
ನಂದೀಯ ಶಿವನ ದಯದಿಂದ | ಹೋದಾಗ
ಮಂದಿ ಬಾಯಾಗ ಇರಬೇಕ


ವಿದ್ಯಾರ್ಥಿ ಕಿರುಪರಿಚಯ
ಅಮೃತ, ಹೆಚ್. ಎ.

6ನೇ ತರಗತಿ
ಜ್ಯೋತಿ ವಿದ್ಯಾಲಯ ಶಿಕ್ಷಣ ಸಂಸ್ಥೆ,
ಹೆಸರಘಟ್ಟ, ಬೆಂಗಳೂರು ಉತ್ತರ ತಾಲ್ಲೂಕು, ಬೆಂಗಳೂರು ನಗರ ಜಿಲ್ಲೆ.

Blog  |  Facebook  |  Twitter

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ