ಭಾನುವಾರ, ನವೆಂಬರ್ 17, 2019

ಶಾಯಿರಿಗಳು

ಪ್ರತಿಯೊಬ್ಬರಿಗೂ ಜೀವನದಲ್ಲಿ ಏನಾದರೂ ಒಂದು ಸಾಧನೆ ಮಾಡಬೇಕೆಂಬ ಆಸೆ ಇದ್ದೇ ಇರುತ್ತದೆ. ಅದಕ್ಕಾಗಿ ಎಲ್ಲರೂ ಪ್ರಯತ್ನಪಡುತ್ತಿರುತ್ತಾರೆ. ಎಲ್ಲರೂ ಒಂದೇ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಾಧ್ಯವಿಲ್ಲ. ಪ್ರತಿಯೊಬ್ಬರೂ ಅವರಿಗೆ ಅನುಕೂಲವಾಗುವಂತಹ ಮತ್ತು ಅವರಿಗೆ ಸಾಧಿಸಲು ಸಾಧ್ಯವಾಗುವಂತಹ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಾರೆ. ಅದೇ ರೀತಿ ನಾನೂ ಸಹ, ಹಲವಾರು ಸಾಹಿತಿಗಳು, ಕವಿಗಳು, ಗೀತ ರಚನಾಕಾರರ ಸ್ಪೂರ್ತಿಯಿಂದ ಕೆಲವು ಶಾಯಿರಿಗಳನ್ನು ಬರೆದಿರುವೆ.

* * *

ಹಕ್ಕಿಗಳ ಇಂಪಾದ ಚಿಲಿಪಿಲಿ ಗಾನ
ಇದನ್ನು ಕೇಳಿ ದೂರವಾಯಿತು ನನ್ನಲ್ಲಿದ್ದ ಮೌನ
ಹಕ್ಕಿಯಂತೆ ಹಾಡಲು ಬಂದಿತು ನನಗೆ ಜ್ಞಾನ
ಇದೇ ನನಗೆ ಸಿಕ್ಕ ದೊಡ್ಡ ಬಹುಮಾನ

* * *

ನಾ ವಾಸಮಾಡಲು ಬೇಕಾಗಿತ್ತು ಒಂದು ನಿವಾಸ
ನಿವಾಸ ಪಡೆಯಲು ಆಯಿತು ಬಹಳ ಪ್ರಯಾಸ
ಪಡೆದ ಮೇಲೆ ನಿವಾರಿಸಿಕೊಂಡೆ ನನ್ನಲ್ಲಿದ್ದ ಎಲ್ಲಾ ಆಯಾಸ

* * *

ಕೆಲವೊಮ್ಮೆ ಬರುವುದು ನಮಗೆಲ್ಲಾ ಆಪತ್ತು
ಜಾಸ್ತಿ ಇದ್ದರೆ ನಮ್ಮಲ್ಲಿ ಸಂಪತ್ತು
ಇದೆಲ್ಲಾ ನಮಗೆ ಗೊತ್ತು
ಆದರೂ ನಾವು ಬಿಡುವುದಿಲ್ಲ ಹಣ ಇದೆಯಲ್ಲ ಎನ್ನುವ ಗತ್ತು

* * *

ನಾನು ವಾಸ ಮಾಡುತ್ತಿದ್ದ ಮಹಡಿ ಮನೆಗೆ
ಕಟ್ಟಲಾಗಲಿಲ್ಲ ನನ್ನಿಂದ ಅದರ ಬಾಡಿಗೆ
ಅದಕ್ಕಾಗಿ ಈಗ ನಾ ಬಂದೆ ಬೀದಿಗೆ

* * *

ನಾ ನೋಡಿದ ಸ್ವಲ ಜನ
ಅವರಿಗಿಲ್ಲ ಒಂದಿಷ್ಟು ಮಾನ
ಸಾಯಂಕಾಲ ಆಯಿತೆಂದರೆ ಮಾಡುತ್ತಾರೆ ಪಾನ
ಮನಸ್ಸಿಗೆ ಬಂದಂತೆ ಹಾಡುತ್ತಾರೆ ಗಾನ

* * *

ಸ್ವಲ್ಪವೇ ತುಂಟತನ
ಸ್ವಲ್ಪ ಸಿರಿತನ
ಸ್ವಲ್ಪವೇ ಭಾವುಕತನ
ಸ್ವಲ್ಪ ಪುಕ್ಕಲುತನ
ಸ್ವಲ್ಪವೇ ಬರೆಯುತ್ತೇನೆ ಕವನ
ಇದು ನನ್ನ ನಿತ್ಯ ಜೀವನ


ವಿದ್ಯಾರ್ಥಿ ಕಿರುಪರಿಚಯ
ಲಿಖಿತ, ಎಲ್.

8ನೇ ತರಗತಿ
ಜ್ಯೋತಿ ವಿದ್ಯಾಲಯ ಶಿಕ್ಷಣ ಸಂಸ್ಥೆ,
ಹೆಸರಘಟ್ಟ, ಬೆಂಗಳೂರು ಉತ್ತರ ತಾಲ್ಲೂಕು, ಬೆಂಗಳೂರು ನಗರ ಜಿಲ್ಲೆ.

Blog  |  Facebook  |  Twitter

2 ಕಾಮೆಂಟ್‌ಗಳು: