ಶನಿವಾರ, ನವೆಂಬರ್ 9, 2019

ಹೆಸರಘಟ್ಟ ಕರಗ

ಚಿತ್ರ ಕೃಪೆ: YouTube
ಹೆಸರಘಟ್ಟ ಬೆಂಗಳೂರು ಉತ್ತರ ತಾಲ್ಲೂಕಿನ ಒಂದು ಹಳ್ಳಿಯಾಗಿದ್ದು, ಇದಕ್ಕೆ ಮೊದಲು ವ್ಯಾಸಘಟ್ಟ ಎಂಬ ಹೆಸರಿತ್ತು. ಏಕೆಂದರೆ ವ್ಯಾಸ ಮಹರ್ಷಿಯು ನೆಲೆಸಿದ್ದರು. ನಂತರ ಜನರು ಹೆಸರಘಟ್ಟ ಎಂದು ಕರೆಯಲು ಪ್ರಾರಂಭಿಸಿದರು.

ಹೆಸರಘಟ್ಟದಲ್ಲಿ ಕರಗ ಉತ್ಸವವನ್ನು ಅದ್ದೂರಿಯಾಗಿ ಆಚರಿಸುತ್ತಾರೆ. ಮಲ್ಲಿಗೆಯ ಕಂಪಿನೊಂದಿಗೆ ಉತ್ಸವ ಕಣ್ತುಂಬಿಕೊಂಡವರು ಲಕ್ಷಾಂತರ ಮಂದಿ. ಪ್ರತಿ ವರ್ಷ ಚೈತ್ರ ಪೌರ್ಣಿಮೆಯ ಬೆಳದಿಂಗಳ ಬೆಳಕಲ್ಲಿ ಕರಗ ಮಹೋತ್ಸವ ಇಡೀ ರಾತ್ರಿ ವೈಭವಯುತವಾಗಿ ನಡೆಯುತ್ತದೆ.

ಬೆಳದಿಂಗಳಲ್ಲಿ ಮಿಂದ ಕತ್ತಲಿನಲ್ಲಿ ನಡೆಯುವ ಕರಗದ ಆರಾಧನೆ ಮತ್ತು ಮೆರವಣಿಗೆಯಲ್ಲಿ ಮಲ್ಲಿಗೆ ಹೂಗಳನ್ನು ಚೆಲ್ಲಲಾಗುತ್ತದೆ. ಹೂವಿನ ಕರಗ ಹೊತ್ತು ನಡೆಯುವ ಪೂಜಾರಿ ಊರೆಲ್ಲಾ ಮೆರವಣಿಗೆ ಬರುತ್ತಾರೆ. ಇದು ಹಳೆಯ ಸಂಪ್ರದಾಯವಾದರೂ, ಬದಲಾದ ಸಂದರ್ಭದಲ್ಲಿ ಬದಲಾಗದ ಸಂಸ್ಕೃತಿಯೊAದಿಗಿನ ಹೊಸ ತಲೆಮಾರಿನ ನಂಟು ಎದ್ದು ಕಾಣುತ್ತದೆ.

ವಸಂತನ ಆಗಮನದೊಂದಿಗೆ ಮರಗಿಡಗಳಲ್ಲಿ ಹೊಸ ಚಿಗುರು ಕಾಣುತ್ತದೆ. ಚೈತ್ರದ ಚಂದಿರ ಪೂರ್ಣವಾಗಿ ಕಾಣಲು ಇನ್ನು ಕೆಲವೇ ದಿನಗಳು ಉಳಿದಿರುವ ಹುಣ್ಣಿಮೆಯ ಸಮಯದಲ್ಲಿ ಕರಗದ ಸಂಭ್ರಮ. ಸುವಾಸನೆ ಸೂಸುವ ಮಲ್ಲಿಗೆ ಹೂಗಳ ಉತ್ಸವ.

ಈ ಹಬ್ಬಕ್ಕೆ ಮೈಸೂರಿನ ಯದುವಂಶದ ಅರಸರು ಪ್ರೋತ್ಸಾಹ ಕೊಟ್ಟರು ಎಂದು ಹೇಳಲಾಗುತ್ತದೆ. ಧರ್ಮರಾಯ ಗುಡಿ ಕಟ್ಟಲು "ಕರಗ" ಹಬ್ಬಕ್ಕೂ ಅವರೆ ನೆರವು ನೀಡಿದರು.. ಬಹಳಷ್ಟು ಊರುಗಳಲ್ಲಿ ಕರಗಕ್ಕೆ ಆಹ್ವಾನ ಪತ್ರಿಕೆ ಅಚ್ಚಾಗುವುದು ಮೈಸೂರು ಅರಸರ ಹೆಸರಿನಲ್ಲಿ. ಇದು ಇಂದಿಗೂ ನಿಂತಿಲ್ಲ. ಪಾಂಡವರ ಕುಲಕ್ಕೆ ಸೇರಿದ ವಹ್ನಿ ಕುಲಸ್ಥರು ಆರಾಧಿಸುವ ಧರ್ಮರಾಯನ ದೇವಾಲಯಗಳಲ್ಲಿ ದ್ರೌಪದಿಗೆ ಹೆಚ್ಚಿನ ಪ್ರಾಧಾನ್ಯ. ಕರಗ ಶಕ್ತಿಯ ಮೂಲಸೆಲೆಯೇ ದ್ರೌಪದಿ ಎಂಬುದು ಇದಕ್ಕೆ ಕಾರಣ.

ವಿದ್ಯಾರ್ಥಿ ಕಿರುಪರಿಚಯ
ಕೃತಿಕ ರಾಜೇಶ್

7ನೇ ತರಗತಿ
ಜ್ಯೋತಿ ವಿದ್ಯಾಲಯ ಶಿಕ್ಷಣ ಸಂಸ್ಥೆ,
ಹೆಸರಘಟ್ಟ, ಬೆಂಗಳೂರು ಉತ್ತರ ತಾಲ್ಲೂಕು, ಬೆಂಗಳೂರು ನಗರ ಜಿಲ್ಲೆ.

Blog  |  Facebook  |  Twitter

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ