ಗುರುವಾರ, ನವೆಂಬರ್ 7, 2019

ಶಿಕ್ಷಕರು

ಚಿತ್ರ ಕೃಪೆ: ಗೂಗಲ್
ಶಿಕ್ಷಕರು ಎಂದ ಕೂಡಲೇ ನಮಗೆ ನೆನಪಾಗುವುದು ಸರ್ವಪಲ್ಲಿ ರಾಧಾಕೃಷ್ಣನ್. ಶಿಕ್ಷಕರು ವಿದ್ಯಾರ್ಥಿಗಳಿಗೆ ಮಾತ್ರವಲ್ಲ, ಇಡೀ ಸಮಾಜಕ್ಕೇ ಮಾದರಿಯಾಗಿರುತ್ತಾರೆ. ಕಲಿಕೆಯಲ್ಲಿ ಆಸಕ್ತಿ ಇರುವ ಎಲ್ಲರಿಗೂ ಗುರುವೊಬ್ಬರು ಬೇಕೇ ಬೇಕು. ಜಗತ್ತಿನಲ್ಲಿ ಅಮ್ಮನ ಹೊರತಾಗಿ ಎಲ್ಲಾ ಸಮಸ್ಯೆಗಳಿಗೂ ದಾರಿದೀಪವಾಗಿ ನಿಲ್ಲಬಲ್ಲ ಶಕ್ತಿವುಳ್ಳವರೆಂದರೆ ಅದು ಶಿಕ್ಷಕರು ಮಾತ್ರ.

ಅಪ್ಪ, ಅಮ್ಮನ ನಂತರ ಮಕ್ಕಳು ಹೆಚ್ಚು ಹಚ್ಚಿಕೊಳ್ಳುವುದು ತಮ್ಮ ಶಿಕ್ಷಕರನ್ನು. ದೇಶಕ್ಕೆ ಉತ್ತಮ ನಾಗರೀಕರನ್ನು ರೂಪಿಸಿಕೊಡುವಲ್ಲಿ ಗುರುವಿನ ಪಾತ್ರ ಮಹತ್ವದ್ದಾಗಿದೆ. ಸರಳತೆ, ತಾಳ್ಮೆ, ಸಮಗ್ರತೆಯ ಪ್ರತಿರೂಪವಾಗಿ ಶಿಕ್ಷಕರನ್ನು ನಾವು ಕಾಣುತ್ತೇವೆ. ಉತ್ತಮ ಶಿಕ್ಷಕರೇ ನಿಜವಾದ ಅನುಕರಣೀಯ ವ್ಯಕ್ತಿಗಳು. ಅಂಧಕಾರವನ್ನು ದೂರವಾಗಿಸುವವರೇ ಗುರುಗಳು. ಇವರು ನಮ್ಮಲ್ಲಿರುವ ಪ್ರಜ್ಞೆಯನ್ನು ಜಾಗೃತಗೊಳಿಸುವ ಶಕ್ತಿಯಾಗಿರುತ್ತಾರೆ. ನಮ್ಮ ಜೀವನದಲ್ಲಿ ಧನಾತ್ಮಕ ಚಿಂತನೆಯನ್ನು ಬೆಳೆಸಿ, ಸರಿ ಮಾರ್ಗವನ್ನು ಶಿಕ್ಷಕರು ತೋರಿಸುತ್ತಾರೆ.

ಗುರುವಾದವರು ತಮ್ಮ ಶಿಷ್ಯರಿಗೆ ತಂದೆ, ತಾಯಿ ಎರಡೂ ಆಗಬಲ್ಲರು. ಒಳ್ಳೆಯ ಮಾರ್ಗದಲ್ಲಿ ನಡೆಯುವವರು, ನಡೆದವರು, ನಡೆಯಬಯಸುವವರು ನಮ್ಮ ಶಿಕ್ಷಕರು. ಶಿಕ್ಷಕರ ಮುಖ್ಯ ಕೆಲಸವೆಂದರೆ ನಮ್ಮ ಬದುಕನ್ನು ಅರ್ಥಪೂರ್ಣವಾಗುವಂತೆ ನಮಗೆ ಮಾರ್ಗದರ್ಶನ ಮಾಡುವುದು. ಸದಭಿರುಚಿಯನ್ನು ಹುಟ್ಟಿಸುವುದೇ ಶಿಕ್ಷಕರ ಉದ್ದೇಶವೇ ಹೊರೆತು ಒಬ್ಬರು ಕಲಿತದ್ದನ್ನು ಮತ್ತೊಬ್ಬರಿಗೆ ಹೇಳುವುದಲ್ಲ. ಶಿಕ್ಷಕರು ಪ್ರತಿ ವ್ಯಕ್ತಿಯಲ್ಲಿ ಪರಿಪೂರ್ಣತೆಯನ್ನು ತರುತ್ತಾರೆ ಹಾಗೂ ಜೀವನದಲ್ಲಿ ಮುನ್ನಡೆಸುವ ಸಾಮರ್ಥ್ಯ ಹೊಂದಿರುತ್ತಾರೆ. ಶಿಕ್ಷಕರು ನಮ್ಮನ್ನು ಶ್ರೇಷ್ಠ ನಾಗರೀಕರನ್ನಾಗಿ ಮಾಡುವಲ್ಲಿ ಮುಖ್ಯ ಪಾತ್ರವಹಿಸುತ್ತಾರೆ.

ಶಿಕ್ಷಕರೆಂದರೆ ಒಬ್ಬ ವ್ಯಕ್ತಿಗೆ, ಶಕ್ತಿ. ಅಜ್ಞಾನದ ಕತ್ತಲೆಯನ್ನು ಕಳೆದು ಸುಜ್ಞಾನದೆಡೆಗೆ ಕರೆದುಕೊಂಡು ಹೋಗುವವರೇ ಶಿಕ್ಷಕರು. ನನ್ನ ಎಲ್ಲಾ ಶಿಕ್ಷಕರಿಗೂ ನನ್ನ ಅನಂತ ನಮನಗಳು.

ವಿದ್ಯಾರ್ಥಿ ಕಿರುಪರಿಚಯ
ಶಿವಾನಿ ಎನ್. ಗೌಡ

7ನೇ ತರಗತಿ
ಜ್ಯೋತಿ ವಿದ್ಯಾಲಯ ಶಿಕ್ಷಣ ಸಂಸ್ಥೆ,
ಹೆಸರಘಟ್ಟ, ಬೆಂಗಳೂರು ಉತ್ತರ ತಾಲ್ಲೂಕು, ಬೆಂಗಳೂರು ನಗರ ಜಿಲ್ಲೆ.

Blog  |  Facebook  |  Twitter

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ