ಸೋಮವಾರ, ನವೆಂಬರ್ 4, 2019

ಚುಟುಕಗಳು

ಶಾಂತಿ ಮಂತ್ರ
ಗಡಿಯಲ್ಲಿ ನಡೆಯುತ್ತಿದೆ ಕುತಂತ್ರ
ಎಷ್ಟೋ ಯೋಧರ ಬದುಕಾಗಿದೆ ಅತಂತ್ರ
ಸಾಮರ್ಥ್ಯವಿದ್ದರೂ ಹೂಡುತ್ತಿಲ್ಲ ರಣತಂತ್ರ
ಕಣ್ಮುಚ್ಚಿ ಜಪಿಸುತ್ತಿದ್ದೇವೆ ಶಾಂತಿ ಮಂತ್ರ..
 * * *
ಗಡವ-ಬಡವ
ದುಡಿಯುವ ಮನಸ್ಸಿಲ್ಲದ ಗಡವ
ಎಷ್ಟೇ ಆಸ್ತಿಯಿದ್ದರೂ ನಾಳೆ ಬಡವ
ದುಡಿಯದವ ಅವನತಿ ಕಾಣುವ
ದುಡಿಯುವವ ಉನ್ನತಿ ನೋಡುವ..
* * *
ರಂಗೋಲಿ
ಮನದಲಿ ಮೂಡಲಿ ತಾಳ್ಮೆಯ ರಂಗೋಲಿ
ಆಗದಿರಲಿ ಕೋಪದಲಿ ಬದುಕು ಚಲ್ಲಾಪಿಲ್ಲಿ
ಇದು ಸಮಾಜ ಬಯಸುವ ಸುವ್ವಾಲಿ
ಇದನು ಕಲಿತು ನೀ ನಗುನಗುತಾ ನಲಿ..
 * * *
ಹಠ
ಮನಸ್ಸಿಗೆ ಲಗಾಮಿದ್ದರೆ ಅದು ಗಾಳಿಪಟ
ನಿಯಂತ್ರಣ ತಪ್ಪಿದರೆ ಅದು ಧೂಳಿಪಟ
ಕೆಟ್ಟದನ್ನೇ ಯೋಚಿಸುವುದು ಅದರ ಚಟ
ಅದನ್ನು ಒಳ್ಳೆಯೆಡೆಗೆ ಸೆಳೆಯುವುದೇ ನನ್ನ ಹಠ..
 * * *
ವಿವರ
ಈ ಜೀವನ ಸುಖದುಃಖಗಳ ಸಾಗರ
ಬಹುಪಾಲು ಅದು ಕಷ್ಟಗಳ ಆಗರ
ಸಂತಸದ ಕ್ಷಣಗಳು ವಿರಳ
ನಮ್ಮ ಬಯಕೆಗಳು ಸಾವಿರ
ಇವೆಲ್ಲದರ ಮಧ್ಯೆ ನಾವೇನು ಮಾಡಿದೆವು ಎಂಬುದೇ
ನಮ್ಮ ವಿವರ..
* * *

ವಿದ್ಯಾರ್ಥಿ ಕಿರುಪರಿಚಯ
ಅಮೃತ, ಎಸ್. ಹೆಚ್.

10ನೇ ತರಗತಿ
ಜ್ಯೋತಿ ವಿದ್ಯಾಲಯ ಶಿಕ್ಷಣ ಸಂಸ್ಥೆ,
ಹೆಸರಘಟ್ಟ, ಬೆಂಗಳೂರು ಉತ್ತರ ತಾಲ್ಲೂಕು, ಬೆಂಗಳೂರು ನಗರ ಜಿಲ್ಲೆ.

Blog  |  Facebook  |  Twitter

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ