ಬುಧವಾರ, ನವೆಂಬರ್ 11, 2015

ಪ್ರೀತಿ

ಮೋಜಿನ ಸಂಗತಿಯಲ್ಲ ಈ ಪ್ರೀತಿ
ಭಾವನೆಗಳ ಸಂಗಮವಾಗಬೇಕು ವಿಶೇಷ ರೀತಿ
ಪ್ರೀತಿ ಕುರುಡು ಎನ್ನುವುದು ಪ್ರತೀತಿ
ಪ್ರೀತಿಸುವವರು ಕುರುಡರಲ್ಲ ಇದು ನಿಜಸ್ಥಿತಿ.

ನಮಗೆ ಅನ್ನಿಸುತ್ತದೆ 'ಇವಳು ಬೇಕು, ಇವಳು ಬೇಕು'
ಆದರೆ ದೇವರು ನಮಗೆ ಕೊಟ್ಟಿದ್ದಾನೆ
ನಾವು ಅದನ್ನು ಉಪಯೋಗಿಸಬೇಕು..?
ಅದೇ ಸಹನೆ,ಯೋಚನೆ..
ಹಳ್ಳಕ್ಕೆ ಬೀಳಬಾರದು ದುಡುಕಿ.

ಕೆಲ ಸಮಯದ ನಂತರ
ನೀವು ಯೋಚನೆ ಮಾಡಿದರೆ
ನಾನು ಪ್ರೀತಿ ಮಾಡಿದ್ದೆ ಇಂತಿಪ..
ಆಗ ನಿಮಗಾಗಬಾರದು ಪಶ್ಚಾತ್ತಾಪ!

ಬದಲಾಗಿ ಸಾರ್ಥಕವೆನಿಸಿದರೆ
ಜೀವನ ಎಷ್ಟು ಸುಂದರ.
ಪ್ರೀತಿಯನ್ನು ಪ್ರೀತಿಯಿಂದ ಪ್ರೀತಿಸಿ
ಪ್ರೀತಿಮಾಡುವ ಮುನ್ನ ಅನುಮಾನಿಸಿ
ಆದರೆ ಪ್ರೀತಿಯಲ್ಲಿ ಅನುಮಾನ ಬೇಡ.

ಲೇಖಕರ ಕಿರುಪರಿಚಯ
ಶ್ರೀ ಶಿಶಿರ್ ಹೆಗಡೆ

ಮಂಗಳೂರು ಮೂಲದವರಾದ ಇವರು ಹುಟ್ಟಿ ಬೆಳೆದದ್ದು ಸಿರ್ಸಿಯಲ್ಲಿ; ಹಿಂದೂ ಧರ್ಮದ ಬಗ್ಗೆ ಅಪಾರ ಗೌರವ-ಅಭಿಮಾನ ಇವರಿಗೆ. ಚುಟುಕ ಹಾಗೂ ಕವನಗಳ ಮೂಲಕ ಭಾವನೆಗಳಿಗೆ ಜೀವ ತುಂಬುವುದು ಇವರ ಹವ್ಯಾಸ.

Blog  |  Facebook  |  Twitter

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ