ಮಂಗಳವಾರ, ನವೆಂಬರ್ 24, 2015

ವರ್ಷಧಾರೆಯೇ ನಿನ್ನೊಳಿದೆ ಎನ್ನ ಮನಸು..

ಭೋರ್ಗರೆವ ಜಡಿಮಳೆಯ ರಭಸಕ್ಕೆ
ಮನದ ಹಳೆಯ ಕೊಳೆ ತೊಳೆದು ಮರು ಜೀವ ಬಂದಂತಿತ್ತು
ಗುಡಿಸಲಂಚಿನಲ್ಲಿ ನಿಂತು ನಿನ್ನ ಆರ್ಭಟವನ್ನು ನೋಡುತ್ತಿದ್ದರೆ
ಬೇರೆಲ್ಲ ಶಬ್ದಗಳನ್ನು ಅಡಗಿಸುವ ನಿನ್ನ ಘರ್ಜನೆಯನ್ನು ಕೇಳುತ್ತಿದ್ದರೆ
ಭೂತ-ಭವಿಷ್ಯಗಳ ಪರಿವೆಯೇ ಇಲ್ಲದಂತಿತ್ತು ಮನ.

ಸೂರಂಚಿನ ಜಡಿಮಳೆಗೆ ಮೈ ಒದ್ದೆಯಾಗಿರಲು
ನಿನ್ನ ಸೌಂದರ್ಯತೆಯ ಸ್ಪರ್ಶಕ್ಕೆ ಭಾವುಕತೆಯಿಂದ ಕಣ್ಣಂಚು ನೆನೆದಿರಲು
ನಿನ್ನ ಆರ್ದ್ರತೆಗೆ ಮನ ಕರಗಿತ್ತು
ಸಮಯ ಸರಿದಿರೆ ಆರ್ಭಟವು ದೂರಾಗಿ
ತುಂತುರು ಹನಿಗಳ ಚಿಟ ಪಟ ಸದ್ದು ಪಟಲ ಸ್ಪರ್ಶ ಮಾಡಿತ್ತು.

ನಿನ್ನ ಚುಂಬನಕ್ಕೆ ಹಸಿರೆಲೆಗಳು ನೃತ್ಯವಾಡುತಿರಲು
ಹಕ್ಕಿಗಳ ಚಿಲಿಪಿಲಿ ಎಲ್ಲೆಲ್ಲೂ ತುಂಬಿರಲು
ಬಣ್ಣ ಬಣ್ಣದ ಕಾಮನಬಿಲ್ಲು ಕಣ್ತುಂಬಿತ್ತು.


ಪ್ರಾಣಿ-ಪಕ್ಷಿ ಲೋಕಕ್ಕೆ ಜೀವಧಾರೆಯೆರೆವ
ಸಸ್ಯ ಪ್ರಪಂಚಕ್ಕೆ ಹಸಿರು ತೊಡಿಸುವ ನಿನ್ನ ಅಗಾಧ ಸಾಮರ್ಥ್ಯ
ಪ್ರಾಪಂಚಿಕ ಕೃತಕತೆಗಳನ್ನು ಮೀರಿ ಮೆಟ್ಟಿ ನಿಲ್ಲುವ
ನಿನ್ನ ಅದ್ಭುತ ಸೊಬಗನ್ನು ಬಣ್ಣಿಸಲು
ಸಾಲದು ಏಳೇಳು ಜನುಮ.

ಲೇಖಕರ ಕಿರುಪರಿಚಯ
ಶ್ರೀಮತಿ ಅಪರ್ಣ ಹೆಗಡೆ

ಮುಲತಃ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದವರಾದ ಇವರು ಪ್ರಸ್ತುತ ಬೆಂಗಳೂರಿನ ಬಹುರಾಷ್ಟ್ರೀಯ ಸಂಸ್ಥೆಯೊಂದರಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಸಣ್ಣ ಕಥೆ ಬರೆಯುವುದು, ಕಸೂತಿ ಹಾಗೂ ಪ್ರವಾಸ ಇವರ ಹವ್ಯಾಸಗಳು.

Blog  |  Facebook  |  Twitter

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ