ಭಾನುವಾರ, ನವೆಂಬರ್ 15, 2015

ಮಳೆಯ ಮುತ್ತು

ನೆನೆದು ಬರುತ್ತಿದ್ದೆ ನಾನು
ನಿನ್ನನ್ನು. ಅಂದು ಯಾಕೋ
ನನಗೆ ನೆನೆಯದೇ ಇರಲಾಗಲಿಲ್ಲ ನಿನ್ನನ್ನು.
ಬೇಡವೆಂದರೂ ನನ್ನನೇ ಏಕೆ ಕಾಡುತ್ತಿದ್ದೆ ನೀನು?
ನಾ, ಹೋದರೂ ಹೋದೇನು ದೂರಕ್ಕೆ
ಹೊಗಲಾರೆ ನಿನ್ನ ನೆನಪುಗಳನ್ನು
ಬಗೆದು ನಾ, ಇನ್ನೆಂದೂ ಮತ್ತೆ ಬಾರದ
ಆ ಲೋಕಕ್ಕೆ.

ಹೇಳಲು ಇರಲಿಲ್ಲ ಯಾರೂ, ಕಾಡುತ್ತಿರುವ
ನಿನ್ನ ನೆನಪುಗಳೇನೆಂದು ಎಲ್ಲರಿಗೂ ತಿಳಿಸಲು.
ನಲ್ಲೆ, ನಿನ್ನ ನೆನಪಲ್ಲೆ ತೊಯ್ದು ತೊಪ್ಪೆ
ಯಾಗಿದ್ದ ನನ್ನ ಮನಸ್ಸಿಗೆ ಮುದ
ವಾಗುತ್ತಿತ್ತು. ಏಕೆಂದರೆ, ಅದಾಗಲೇ
ನಾನು ನಿಜವಾಗಿಯೂ ನೆನೆದಿದ್ದೆ,
ಧುತ್ತೆಂದು ಧರೆಗಿಳಿದ ಬಿರುಗಾಳಿಯಂತಹ ಮಳೆಗೆ.

ಏನೇ ಆಗಲಿ ನಲ್ಲೆ, ನಿನ್ನ ನೆನೆಯದೆ
ಇರಲಾಗುತ್ತಿಲ್ಲ ನನಗೆ. ಸಿಗಲಾರದ
ಮುತ್ತು ನೀನೆಂದೂ ನನಗೆ.

ಲೇಖಕರ ಕಿರುಪರಿಚಯ
ಶ್ರೀ ಶ್ರೀನಿವಾಸಮೂರ್ತಿ, ಎಸ್. ಜಿ.

ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ಇವರು ಮೂಲತಃ ದಾವಣಗೆರೆಯವರು. ಕರ್ನಾಟಕ ಸರ್ಕಾರದ ಪಶುಪಾಲನಾ ಇಲಾಖೆಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

Blog  |  Facebook  |  Twitter

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ