ಭಾನುವಾರ, ನವೆಂಬರ್ 17, 2013

ಕರುನಾಡು

ಕರುನಾಡು ನಮ್ಮದು ಕನ್ನಡಿಗರು ನಾವು
ಇತಿಹಾಸದಿಂದ ತೊಯ್ದಿದೆ ಕನ್ನಡದ ಮಣ್ಣು
ನಮ್ಮ ರೈತ ಸ್ಪರ್ಶಿಸಿ ಮಣ್ಣಾಗಿದೆ ಹೊನ್ನು


 ಮಲೆನಾಡಿನಿಂದ ಬಂದಿದೆ ಜಲವೆಂಬ ಕಣಜ
 ಕನ್ನಡಾಂಬೆಯ ಗುಣ ಹೊತ್ತು ನಾಚಿ ನಿಂತಿದೆ ನೀರಜ
 ಕರುನಾಡು ನಮ್ಮದು ಕನ್ನಡಿಗರು ನಾವು


 ಬಸವಣ್ಣನಿಂದ ಸಾಹಿತ್ಯದಲ್ಲಿ ವಚನ ಗೀತೆ
 ಪಂಪ ಪೊನ್ನ ರನ್ನರ ಸಾಹಿತ್ಯದ ಯಶೋಗಾಥೆ
 ವಿಜಯನಗರ ಹೊಯ್ಸಳ ಚಾಳುಕ್ಯ ಸಾಮ್ರಾಜ್ಯದ ಮೆರೆದಾಟ
 ಸಾರಿ ಹೇಳುತ್ತಿದೆ ನಮ್ಮಯ ಕನ್ನಡ ಬಾವುಟ
 ಕರುನಾಡು ನಮ್ಮದು ಕನ್ನಡಿಗರು ನಾವು


 ಕುವೆಂಪು ಸಾರಿದ ಮಾನವ ಧರ್ಮದ ಉಕ್ತಿ
 ಮರೆತರೆ ಸಿಗುವುದಿಲ್ಲ ಮನುಷ್ಯನಿಗೆ ಮುಕ್ತಿ
 ಭಾರತದ ಸಾಹಿತ್ಯಕ್ಕೆ ಕನ್ನಡವೇ ಶಿಖರವು
 ಅಷ್ಟ ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದದ್ದು ಕನ್ನಡಕೆ ಕಳಸವು
 ಕರುನಾಡು ನಮ್ಮದು ಕನ್ನಡಿಗರು ನಾವು

  - ಮಹಬೂಬ್ ಬಾಷಾ ಎಂ.

ಲೇಖಕರ ಕಿರುಪರಿಚಯ
ಶ್ರೀ ಮಹಬೂಬ್ ಬಾಷಾ ಎಂ.

ಬಳ್ಳಾರಿ ಜಿಲ್ಲೆಯ ಹಡಗಲಿ ತಾಲೂಕಿನ ಬಾವಿಹಳ್ಳಿ ಗ್ರಾಮದವರಾದ ಇವರು ಪ್ರಸ್ತುತ ಬಿ. ಎ. ಪದವಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ಆಟೋಟದಲ್ಲಿ ಆಸಕ್ತಿ ಹೊಂದಿರುವ ಇವರಿಗೆ ಕವಿತೆಗಳನ್ನು ಬರೆಯುವುದು, ಕನ್ನಡ ಸಾಹಿತ್ಯ ಓದುವುದು ಹಾಗೂ ಸ್ವಯಂ ಸೇವಾ ಸಂಘ ಸಂಸ್ಥೆಗಳ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದು ಹವ್ಯಾಸ.

Blog  |  Facebook  |  Twitter

1 ಕಾಮೆಂಟ್‌: