ಸೋಮವಾರ, ನವೆಂಬರ್ 28, 2016

ತೆನೆ ಮರೆಯ ಕ್ರಾಂತಿ ರಾಗಿ ಲ್ಷ್ಮಣಯ್ಯ - ಪ್ರೊ. ಎಂ. ನಾರಾಯಣಸ್ವಾಮಿ

ತೆನೆ ಮರೆಯ ಕ್ರಾಂತಿ ರಾಗಿ ಲ್ಷ್ಮಣಯ್ಯ - ಪ್ರೊ. ಎಂ. ನಾರಾಯಣಸ್ವಾಮಿ

ಶೀರ್ಷಿಕೆ: ತೆನೆ ಮರೆಯ ಕ್ರಾಂತಿ ರಾಗಿ ಲ್ಷ್ಮಣಯ್ಯ - ಇಂಡಾಫ್ ರಾಗಿ ತಳಿಗಳ ಕಂಡುಹಿಡಿದ ವಿಜ್ಞಾನಿ
ಲೇಖಕರು: ಪ್ರೊ. ಎಂ. ನಾರಾಯಣಸ್ವಾಮಿ ಹಾಗೂ ರಮೇಶ್ ಸಂಕ್ರಾಂತಿ
ಪ್ರಕಾಶಕರು: ಅಸೀಮ ಅಕ್ಷರ, ಅಮೃತನಗರ, ಬೆಂಗಳೂರು. 
ಪ್ರಧಮ ಮುದ್ರಣ: 2012
ಐ.ಎಸ್.ಬಿ.ಎನ್.: 978-81-925246-4-1

ಪುಸ್ತಕ ಕುರಿತು: ಲಕ್ಷ್ಮಣಯ್ಯನವರ ಜನನ 1921ರ ಮೇ 15 ರಂದು ಮೈಸೂರು ತಾಲೂಕಿನ ಹಾರೋಹಳ್ಳಿಯಲ್ಲಿ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಇಂಟರ್ ಮೀಡಿಯೇಟ್ ಓದು. ರಸಾಯನ ಶಾಸ್ತ್ರ, ಸಸ್ಯಶಾಸ್ತ್ರ ಮತ್ತು ಪ್ರಾಣಿಶಾಸ್ತ್ರ ವಿಷಯಗಳೊಂದಿಗೆ 1946ರಲ್ಲಿ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಿಂದ ಬಿ.ಎಸ್.ಸಿ. ಪದವಿ. ರೈಲ್ವೆ ಇಲಾಖೆಯಲ್ಲಿ ಅಲ್ಪ ಕಾಲದ ಸೇವೆಯ ನಂತರ, 1949ರಲ್ಲಿ ಮಂಡ್ಯದ ವಿಸಿ ಫಾರಂನಲ್ಲಿ 'ಕಿರಿಯ ಸಹಾಯಕ ಸಸ್ಯ ಶಾಸ್ತ್ರಜ್ಞ'ರಾದರು. 1964ರ ಹೊತ್ತಿಗೆ ಸ್ಥಳೀಯ ರಾಗಿ ತಳಿಗಳೊಂದಿಗೆ ಕೊಯಮತ್ತೂರಿನ ರಾಗಿ ತಳಿಗಳನ್ನು ಸಂಕರಣಗೊಳಿಸಿ ಅನ್ನಪೂರ್ಣ, ಉದಯ, ಪೂರ್ಣ, ಅರುಣ, ಶಕ್ತಿ, ಸಂಪೂರ್ಣ, ಕಾವೇರಿ ತಳಿಗಳನ್ನು ಲಕ್ಷ್ಮಣಯ್ಯನವರು ಬಿಡುಗಡೆ ಮಾಡಿದರು. 1964ರ ನಂತರ ದೇಸೀ ರಾಗಿ ತಳಿಗಳನ್ನು ಆಫ್ರಿಕಾ ದೇಶದ ರಾಗಿ ತಳಿಗಳೊಂದಿಗೆ ಸಂಕರಣ ಮಾಡಿ ಇಂಡಾಫ್ 1ರಿಂದ ಇಂಡಾಫ್ (ಇಂಡಿಯಾ + ಆಫ್ರಿಕಾ) 15ರವರೆಗೆ ಅಧಿಕ ಇಳುವರಿ ರಾಗಿ ತಳಿಗಳನ್ನು ಅಭಿವೃದ್ಧಿಗೊಳಿಸಿದರು. ಇದರಿಂದ ಎಕರೆಗೆ ಐದಾರು ಕ್ವಿಂಟಾಲ್ ರಾಗಿ ಇಳುವರಿಯ ಬದಲಿಗೆ ಎಕರೆಗೆ 15ರಿಂದ 20 ಕ್ವಿಂಟಾಲ್ ರಾಗಿ ಬೆಳೆಯಲು ಸಾಧ್ಯವಾಯಿತು. ಇದರ ಪರಿಣಾಮವಾಗಿ ಕೋಟ್ಯಾಂತರ ಜನರ ಹಸಿವು ನೀಗಿತು. ಇದನ್ನು "ಕರ್ನಾಟಕದ ಹಸಿರು ಕ್ರಾಂತಿ" ಎನ್ನಬಹುದು. - ಪ್ರಕಾಶಕರು.



ಸಾಗರದಂತೆ ವಿಶಾಲವಾಗಿರುವ ಶ್ರೀಮಂತ ಕನ್ನಡ ಸಾಹಿತ್ಯಿಕ ಸಂಪತ್ತಿನಿಂದ ಕೆಲವು ಪುಸ್ತಕ ಮಣಿರತ್ನಗಳನ್ನು ಆರಿಸಿ, ಈ ಕಾರ್ಯಕ್ರಮದಲ್ಲಿ ಪರಿಚಯಿಸುವ ಅಭಿಲಾಷೆಯೊಂದಿಗೆ ಈ ಪ್ರಸ್ತುತಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ