ಭಾನುವಾರ, ನವೆಂಬರ್ 27, 2016

ಮಾಲ್ಗುಡಿ ದಿನಗಳು - ಡಾ. ಎಚ್. ರಾಮಚಂದ್ರ ಸ್ವಾಮಿ

ಮಾಲ್ಗುಡಿ ದಿನಗಳು - ಡಾ. ಎಚ್. ರಾಮಚಂದ್ರ ಸ್ವಾಮಿ

ಶೀರ್ಷಿಕೆ: ಮಾಲ್ಗುಡಿ ದಿನಗಳು
ಮೂಲ ಲೇಖಕರು: ಆರ್. ಕೆ. ನಾರಾಯಣ್
ಕನ್ನಡ ಅನುವಾದ: ಡಾ. ಎಚ್. ರಾಮಚಂದ್ರ ಸ್ವಾಮಿ
ಪ್ರಕಾಶಕರು: ಪ್ರಿಸಮ್ ಬುಕ್ಸ್ ಪ್ರೈ. ಲಿ., ಬನಶಂಕರಿ 2ನೇ ಹಂತ, ಬೆಂಗಳೂರು.
ಪ್ರಧಮ ಮುದ್ರಣ: 2009
ಐ.ಎಸ್.ಬಿ.ಎನ್.: 978-81-7286-588-7

ಪುಸ್ತಕ ಕುರಿತು: ಆರ್ .ಕೆ. ನಾರಾಯಣ್ ಅವರ ಬರಹವೆಂದರೆ ದಕ್ಷಿಣ ಭಾರತದ ಮಧ್ಯಮವರ್ಗದ ಜನರಿಗೆ ಒಂದು ರಸದೌತಣವಿದ್ದಂತೆ. ಅವರ ಕಲ್ಪನೆಯ ಮಾಲ್ಗುಡಿ ನಮ್ಮ ಮನೋರಾಜ್ಯದ ಆಶೋತ್ತರಗಳನ್ನೆಲ್ಲ ಸಾಕರಗೊಳಿಸುವ ಯಶಸ್ವೀ ಪ್ರಯತ್ನ. ಇಂಗ್ಲೀಷಿನಂತಹ ಪರಕೀಯ ಭಾಷೆಯನ್ನು ನಾವು ಮೈಗೂಡಿಸಿಕೊಂಡಿದ್ದೇವೆ, ನಿಜ; ಆದರೆ ನಮ್ಮ ಮನಸ್ಸಿಗೂ ಕೊಡಿಸಿ ಕೊಟ್ಟು ಅದನ್ನು ನಮ್ಮದೇ ಭಾಷೆಯನ್ನಾಗಿ ಮಾಡಿಬಿಟ್ಟಿವೆ, ಆರ್. ಕೆ. ನಾರಾಯಣ್ ಅವರ ಕೃತಿಗಳು. ಮಾಲ್ಗುಡಿಯ ವರ್ಣಮಯ ಜೀವನಸಿರಿಗೆ ಮೂವತ್ತೆರಡು ಸಣ್ಣ ಕಥೆಗಳನ್ನು ಸೇರಿಸುವ ಮೂಲಕ ಅದರ ರುಚಿವೈವಿಧ್ಯವನ್ನು 'ಮಾಲ್ಗುಡಿ ದಿನಗಳು' ಇನ್ನೂ ಹೆಚ್ಚಿಸಿದೆಯೆಂದರೆ ಅತಿಶಯೋಕ್ತಿಯಾಗಲಾರದು. 'ಮಾಲ್ಗುಡಿ ಎಲ್ಲಿದೆ?' ಎಂದು ಕೇಳಿದವರಿಗೆ ಅದು ದಕ್ಷಿಣ ಭಾರತದ ಕಾಲ್ಪನಿಕವಾದ ಒಂದು ಪುಟ್ಟ ಊರು ಎಂದರೆ ಅರ್ಧಸತ್ಯ ಅಷ್ಟೇ; ಏಕೆಂದರೆ ಮಾಲ್ಗುಡಿಯ ವ್ಯಕ್ತಿಗಳು ಎಲ್ಲಲ್ಲೂ ಕಂಡುಬರುವಂಥವರು ಎನ್ನುವ ಆರ್. ಕೆ. ನಾರಾಯಣ್ ಒಬ್ಬ ಮಾಂತ್ರಿಕ ಕಥೆಗಾರ-ಪದಗಳ ಅದ್ಭುತ ನೇಯ್ಗೆಯಲ್ಲಿ ಅನುಪಮ ಸುಂದರ ಕನಸುಗಳನ್ನು ಮಾಸದ ಹಾಗೆ ಹಿಡಿದು ಕಟ್ಟಿಕೊಡುವ ಕಲೆ ಅವರಿಗೆ ಸಿದ್ಧಿಸಿದೆ. ಹಾಗೆಂದೇ ಅವರ ಸಾಹಿತ್ಯ ಬಹುಕಾಲ ನಿಲ್ಲಬಲ್ಲುದಾಗಿದೆ, ಲೋಕವಿಖ್ಯಾತವಾಗಿದೆ. - ಪ್ರಕಾಶಕರು.



ಸಾಗರದಂತೆ ವಿಶಾಲವಾಗಿರುವ ಶ್ರೀಮಂತ ಕನ್ನಡ ಸಾಹಿತ್ಯಿಕ ಸಂಪತ್ತಿನಿಂದ ಕೆಲವು ಪುಸ್ತಕ ಮಣಿರತ್ನಗಳನ್ನು ಆರಿಸಿ, ಈ ಕಾರ್ಯಕ್ರಮದಲ್ಲಿ ಪರಿಚಯಿಸುವ ಅಭಿಲಾಷೆಯೊಂದಿಗೆ ಈ ಪ್ರಸ್ತುತಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ