ಗುರುವಾರ, ನವೆಂಬರ್ 24, 2016

ಗರ್ಭಗುಡಿ - ಅನುಪಮಾ ಸತೀಶ್

ಗರ್ಭಗುಡಿ - ಅನುಪಮಾ ಸತೀಶ್

ಶೀರ್ಷಿಕೆ: ಗರ್ಭಗುಡಿ
ಲೇಖಕರು: ಅನುಪಮಾ ಸತೀಶ್
ಪ್ರಕಾಶಕರು: ಸಮೃದ್ಧ ಸಾಹಿತ್ಯ, ಹನ್ನೊಂದನೇ 'ಬಿ' ಅಡ್ಡರಸ್ತೆ, ವಿಠಲನಗರ, ಬೆಂಗಳೂರು. 
ಪ್ರಧಮ ಮುದ್ರಣ: 2015
ಐ.ಎಸ್.ಬಿ.ಎನ್.: 978-81-931900-1-2

ಪುಸ್ತಕ ಕುರಿತು: ಪ್ರತಿಯೊಂದು ಹೆಣ್ಣಿಗೂ ಅತ್ಯಂತ ಸಂತಸದ ಬಯಕೆಯೆಂದರೆ ತನ್ನ ಮಗುವನ್ನು ಪಡೆಯುವುದು. ತಾಯ್ತನ ಮೇರಿದ ಸಂಭ್ರಮವಿಲ್ಲ. ಜೀವನದಲ್ಲಿ ಯಾವುದು ಪ್ರಾಮುಖ್ಯವೋ ಅದೇ ಇಲ್ಲದಿದ್ದಲ್ಲಿ ಬದುಕಿ ಪ್ರಯೋಜನವೇನು ಎಂಬ ಪ್ರಶ್ನೆ ಉದ್ಭವಿಸುತ್ತದೆ. ಮೇಲಿನ ಪ್ರಶ್ನೆಗೆ ಉತ್ತರದಂತೆ 'ಗರ್ಭಗುಡಿ' ಬಯಕೆ ಈಡೇರದ ತಾಯಿಯ ಒಂದು ಸತ್ಯಕಥೆ. ವೈವಾಹಿಕ ಜೀವನದ ಪ್ರಾರಂಭದಲ್ಲೇ ಮಗು ಬೇಡವೆಂದು ನಿರ್ಧರಿಸಿ ಗರ್ಭಪಾತ ಚಿಕಿತ್ಸೆಯಿಂದಾಗಿ ಮುಂದೆ ಮಕ್ಕಳೇ ಆಗದಂತಹ ಪರಿಸ್ಥಿತಿಯನ್ನು ಎದುರಿಸಿದ ಒಂದು ಸಂದರ್ಭ. ಮಗುವನ್ನು ಪಡೆಯಲು ಮಾಡಿದ ಪೂಜೆ, ಪುನಸ್ಕಾರಗಳು, ವ್ರತಗಳು, ಹರಕೆಗಳ ಸತ್ಯದರ್ಶನವಿದೆ. ಜ್ಯೋತಿಷಿಗಳಿಂದ ಹಿಡಿದು ಪವಾಡಪುರುಷರವರೆಗೂ ಭೇಟಿ ನೀಡಿದ ವಿವರಗಳಿವೆ. ಆಧುನಿಕ ಜಗತ್ತಿನ ವೈದ್ಯಕೀಯ ಚಿಕಿತ್ಸಾಕ್ರಮಗಳ ಮಾಹಿತಿಯೂ ಇದೆ. ಯಾವುದೇ ರೀತಿಯ ಪರಿಹಾರವು ಯಶಸ್ವೀಯಾಗದಿದ್ದಾಗ ಜೀವನಕ್ರಮವನ್ನೇ ಬದಲಿಸಿಕೊಂಡು ಮಗುವಿಲ್ಲದ ಬದುಕಿಗೆ ಸಾರ್ಥಕತೆಯನ್ನು ಕಲ್ಪಿಸಿರುವ ಒಂದು ನಿದರ್ಶನ. ಜೊತೆಗೆ ಸಮಾಜಕ್ಕೆ ಬೇಕಾಗುವ ಒಂದು ಮಾದರಿ ವ್ಯಕ್ತಿಯಾಗಿದ್ದಾರೆ ಅನುಪಮ. ಎಲ್ಲ ಸಂದರ್ಭಗಳಲ್ಲಿಯೂ ಅವರ ಪತಿ ಸತೀಶ್ ರವರ ಸಹಕಾರ ಎದ್ದು ಕಾಣುತ್ತದೆ. ಮಕ್ಕಳನ್ನು ಪಡೆಯಲು ಸಮಸ್ಯೆಯಿರುವ ಎಲ್ಲಾ ಮಹಿಳೆಯರಿಗೆ ಒಂದು ಅದ್ಭುತ ಮಾರ್ಗದರ್ಶಿ. ಜೊತೆಗೆ ಪ್ರೀತಿಯ ಹಾಗೂ ಯಶಸ್ವೀ ಜೀವನ ನಡೆಸಲು ಹಲವಾರು ಉದಾಹರಣೆಗಳಿವೆ. ಕನ್ನಡ ಸಾಹಿತ್ಯದ ಒಂದು ಅಪರೂಪದ ಕೃತಿ. - ಬಿ. ಆರ್. ಪ್ರಸಾದ್.



ಸಾಗರದಂತೆ ವಿಶಾಲವಾಗಿರುವ ಶ್ರೀಮಂತ ಕನ್ನಡ ಸಾಹಿತ್ಯಿಕ ಸಂಪತ್ತಿನಿಂದ ಕೆಲವು ಪುಸ್ತಕ ಮಣಿರತ್ನಗಳನ್ನು ಆರಿಸಿ, ಈ ಕಾರ್ಯಕ್ರಮದಲ್ಲಿ ಪರಿಚಯಿಸುವ ಅಭಿಲಾಷೆಯೊಂದಿಗೆ ಈ ಪ್ರಸ್ತುತಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ