ಶುಕ್ರವಾರ, ನವೆಂಬರ್ 11, 2016

ಶಕ್ತಿ ಸಾರಥಿ ರಷ್ಟ್ರಪತಿ ಅಬ್ದುಲ್ ಕಲಾಂ - ಟಿ. ಆರ್. ಅನಂತರಾಮು

ಶಕ್ತಿ ಸಾರಥಿ ರಷ್ಟ್ರಪತಿ ಅಬ್ದುಲ್ ಕಲಾಂ - ಟಿ. ಆರ್. ಅನಂತರಾಮು

ಶೀರ್ಷಿಕೆ: ಶಕ್ತಿ ಸಾರಥಿ ರಷ್ಟ್ರಪತಿ ಅಬ್ದುಲ್ ಕಲಾಂ
ಲೇಖಕರು: ಟಿ. ಆರ್. ಅನಂತರಾಮು 
ಪ್ರಕಾಶಕರು: ಸಪ್ನ ಬುಕ್ ಹೌಸ್, ಗಾಂಧಿನಗರ, ಬೆಂಗಳೂರು.
ಪ್ರಧಮ ಮುದ್ರಣ: 2002
ಐ.ಎಸ್.ಬಿ.ಎನ್.: 81-280-0088-8

ಪುಸ್ತಕ ಕುರಿತು: ಅಬ್ದುಲ್ ಕಲಾಂ ಅವರ ಹೆಸರು ರಾಷ್ಟ್ರಪತಿ ಸ್ಥಾನಕ್ಕೆ ಸೂಚಿತವಾದಮೇಲೆ ಅವರ ಬದುಕಿನ ಬಗ್ಗೆ ಸಹಜವಾಗಿಯೇ ನನಗೂ ಕುತೂಹಲ ಉಂಟಾಯಿತು. ಅವರ ಬಾಹ್ಯ ಚಹರೆಯ ಬಗ್ಗೆ ಇದ್ದ ಭಾವನೆಗಳೆಲ್ಲ ಕರಗಿ, ಈಗ ಆದರ್ಶಪ್ರಾಯವಾದ ವ್ಯಕ್ತಿ ಕಣ್ಣಮುಂದೆ ನಿಂತಿದ್ದರು. ಇದೇ ವೇಳೆಗೆ ನಾಡಿನ ಹಿರಿಯ ವಿದ್ವಾಂಸರೂ, ನನ್ನ ಬಗ್ಗೆ ಶಿಷ್ಯ ಪ್ರೀತಿಯನ್ನು ತಳೆದು ಅನೇಕ ಪುಸ್ತಕಗಳನ್ನೂ ನನ್ನಿಂದ ಬರೆಸಿದ್ದ ಪ್ರೊ. ಎಲ್. ಎಸ್. ಶೇಷಗಿರಿರಾವ್ ಅವರು "ಅಬ್ದುಲ್ ಕಲಾಂ ಅವರ ಜೀವನ ಕುರಿತು, ಸಾಧನೆಗೆ ಒತ್ತುಕೊಟ್ಟು ಒಂದು ಪುಸ್ತಕ ಬರೆಸಬೇಕಲ್ಲ, ಸಪ್ನ ಬುಕ್ ಹೌಸ್ ಪ್ರಕಟಿಸಲು ಮುಂದಾಗಿದೆ" ಎಂದರು. ಯಾರೇ ಪುಸ್ತಕ ಬರೆಯಲಿ ಅವರ ಎದುರಿಗೆ ಕ್ಯಾಲೆಂಡರ್ ಇರುತ್ತದೆ, ಗಡಿಯಾರವಲ್ಲ. ನನ್ನೆದುರಿಗಿದ್ದದ್ದು ಕ್ಯಾಲೆಂಡರ್ ಅಲ್ಲ, ಗಡಿಯಾರ. ಹದಿನೇಳು ದಿನಗಳೊಳಗೆ ಬರವಣಿಗೆ ಮುಗಿಸಲೇಬೇಕಾದ ಪರಿಸ್ಥಿತಿ. ರಾಕೆಟ್ ತಂತ್ರಜ್ಞ ಅಬ್ದುಲ್ ಕಲಾಂ ಅವರು ಈಗ ರಾಷ್ಟ್ರದ ಸಂವಿಧಾನ ರಕ್ಷಕರಾಗಿದ್ದಾರೆ. ಅವರ ಬದುಕು ಮತ್ತು ಸಾಧನೆ ನಮ್ಮೊಳಗೆ ಒಂದಿಷ್ಟು ಕಿಚ್ಚು, ಒಂದಿಷ್ಟು ಕೆಚ್ಚು ಹುಟ್ಟಿಸುವಂತಾದರೆ ಅದಕ್ಕಿಂತ ಇನ್ನೇನು ಬೇಕು ಬರೆದವರಿಗೆ? - ಟಿ. ಆರ್. ಅನಂತರಾಮು.



ಸಾಗರದಂತೆ ವಿಶಾಲವಾಗಿರುವ ಶ್ರೀಮಂತ ಕನ್ನಡ ಸಾಹಿತ್ಯಿಕ ಸಂಪತ್ತಿನಿಂದ ಕೆಲವು ಪುಸ್ತಕ ಮಣಿರತ್ನಗಳನ್ನು ಆರಿಸಿ, ಈ ಕಾರ್ಯಕ್ರಮದಲ್ಲಿ ಪರಿಚಯಿಸುವ ಅಭಿಲಾಷೆಯೊಂದಿಗೆ ಈ ಪ್ರಸ್ತುತಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ