ಗುರುವಾರ, ನವೆಂಬರ್ 10, 2016

ಹಿಮಾಲಯನ್ ಬ್ಲಂಡರ್ - ರವಿ ಬೆಳಗೆರೆ

ಹಿಮಾಲಯನ್ ಬ್ಲಂಡರ್ - ರವಿ ಬೆಳಗೆರೆ

ಶೀರ್ಷಿಕೆ: ಹಿಮಾಲಯನ್ ಬ್ಲಂಡರ್ - ಸಹಸ್ರ ಯೋಧರ ನೆತ್ತರಗಾಥೆ
ಮೂಲ ಲೇಖಕರು: ಬ್ರಿಗೇಡಿಯರ್ ಜಾನ್ ಪಿ. ದಳವಿ
ಕನ್ನಡ ಅನುವಾದ: ರವಿ ಬೆಳಗೆರೆ
ಪ್ರಕಾಶಕರು: ಭಾವನಾ ಪ್ರಕಾಶನ, ಬನಶಂಕರಿ ಎರಡನೇ ಹಂತ, ಪದ್ಮನಾಭನಗರ, ಬೆಂಗಳೂರು.
ಪ್ರಧಮ ಮುದ್ರಣ: 1999

ಪುಸ್ತಕ ಕುರಿತು: ಈ ಪುಸ್ತಕಕ್ಕೊಂದು ಮುನ್ನುಡಿ ಬೇಕಾಗಿಲ್ಲ. ಇಡೀ ಪುಸ್ತಕವೇ ಒಂದು ಚಮರಗೀತೆ. ಒಬ್ಬ ಮಹಾ ಯೋಧನ ಕಣ್ಣೀರು. ಒಂದು ದೇಶ ಅನುಭವಿಸಿದ ಕಳಂಕ. ಮೂವತ್ತೇಳು ವರ್ಷಗಳಾಗಿ ಹೋದವು; ಆ ಕಳಂಕವನ್ನು ನಾವ್ಯಾರೂ ಮರೆಯಲಾಗಿಲ್ಲ. ಆ ಕಳಂಕಕ್ಕೆ ಕಾರಣರಾದ ಪಂಡಿತ ಜವಾಹರಲಾಲ್ ನೆಹರೂ, ನಮ್ಮ ರಕ್ಷಣಾ ಮಂತ್ರಿ ವೆಂಗಳಿಲ್ ಕೃಷ್ಣನ್ ಮೆನನ್, ಇಬ್ಬರು ಮಹಾದಂಡನಾಯಕರಾದ ಜನರಲ್ ಪ್ರಾಣನಾಥ ಥಾಪರ್ ಮತ್ತು ಲೆಫ್ಟಿನೆಂಟ್ ಜನರಲ್ ಬಿ.ಎಂ. ಕೌಲ್ ಮುಂತಾದವರ್ಯಾರನ್ನೂ ನಮ್ಮ ದೇಶದ ಇತಿಹಾಸ ಕ್ಷಮಿಸಿಲ್ಲ. ಯಾವತ್ತಿಗೂ ಕ್ಷಮಿಸಲಾರದು. ಅಲ್ಲಿ ಭಾರತದ ಗಡಿಯಲ್ಲಿ ನಮ್ಮ ನಿಸ್ಸಹಾಯಕ ಯೋಧನೊಬ್ಬ ಜೇಬಿನಲ್ಲಿದ್ದ ಕಟ್ಟಕಡೆಯ ಕಾಡತೂಸನ್ನು ಶತ್ರುವಿನೆಡೆಗೆ ಫೈರ್ ಮಾಡಿ, ಆ ನಂತರ ಏನೇನೂ ಮಾಡಲಾಗದೆ ಹಿಮಕಾಡಿನ ಬಟಾಬಯಲಿನಲ್ಲಿ ಬೆಚ್ಚನೆಯದೊಂದು ಅಂಗಿಯೂ ಇಲ್ಲದಂತೆ ನಿಂತಿದ್ದ. ಅವನನ್ನು ಚೀನೀ ಸೈನಿಕರು ನಾಲ್ಕೂ ಕಡೆಯಿಂದ ಸುತ್ತುವರೆದು ಪ್ರಾಣಿಯನ್ನು ಬೇಟೆಯಾಡಿದಂತೆ ಬೇಟೆಯಾಡಿ ಕೊಂದುಬಿಟ್ಟರು. - ರವಿ ಬೆಳಗೆರೆ.



ಸಾಗರದಂತೆ ವಿಶಾಲವಾಗಿರುವ ಶ್ರೀಮಂತ ಕನ್ನಡ ಸಾಹಿತ್ಯಿಕ ಸಂಪತ್ತಿನಿಂದ ಕೆಲವು ಪುಸ್ತಕ ಮಣಿರತ್ನಗಳನ್ನು ಆರಿಸಿ, ಈ ಕಾರ್ಯಕ್ರಮದಲ್ಲಿ ಪರಿಚಯಿಸುವ ಅಭಿಲಾಷೆಯೊಂದಿಗೆ ಈ ಪ್ರಸ್ತುತಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ